More

    ಮಹಾ ಡಿಸಿಎಂ ಹೇಳಿಕೆಗೆ ಸವದಿ ಕಿಡಿ

    ಕಲಬುರಗಿ: ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನೀಡಿದ ಹೇಳಿಕೆ ಉದ್ಧಟತನದ್ದು ಎಂದು ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.
    ಯಾವುದೇ ಹೇಳಿಕೆ ನೀಡುವುದಕ್ಕೂ ಮೊದಲು ಇತಿಹಾಸವನ್ನೊಮ್ಮೆ ಗಮನಿಸಬೇಕು. ಗಡಿ ವಿವಾದ ಮುಗಿದ ಅಧ್ಯಾಯ. ಸೂರ್ಯ-ಚಂದ್ರ ಇರೋವರೆಗೂ ಬೆಳಗಾವಿ ನಮ್ಮದೇ. ಈ ಸಂಬಂಧ ಉದ್ಧಟತನದಿಂದ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಅವರು ಸ್ಥಳೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.
    ಇನ್ನು ರಾಜ್ಯ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಆ ಸಮುದಾಯದ ಶ್ರೇಯೋಭಿವೃದ್ಧಿ ಉದ್ದೇಶದಿಂದ. ಸಾವಿರಾರು ವರ್ಷಗಳಿಂದ ಮರಾಠಾ ಸಮುದಾಯ ನಮ್ಮ ನೆಲದಲ್ಲಿ ನೆಲೆಸಿದೆ. ಈ ಸಮುದಾಯದ ಬಡವರಿಗೆ ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ನಿಗಮ ಸ್ಥಾಪಿಸಲಾಗಿದೆ ಹೊರತು, ಭಾಷೆಯ ವಿಷಯದ ಮಾತೇ ಬರಲ್ಲ ಎಂದು ಸ್ಪಷ್ಟಪಡಿಸಿದರು.
    ಕನ್ನಡ ಪ್ರಾಧಿಕಾರ, ಮರಾಠಿ ಪ್ರಾಧಿಕಾರದಂತಿಲ್ಲ ಈ ನಿಗಮ. ಇಡೀ ಸಮುದಾಯದ ಏಳಿಗೆಯೇ ನಿಗಮ ಸ್ಥಾಪನೆಯ ಏಕೈಕ ಉದ್ದೇಶ. ಎಲ್ಲರಂತೆ ಮರಾಠಾ ಸಮುದಾಯದವರನ್ನು ಪ್ರೀತಿಸೋಣ. ಈ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ಅವರು ಕನ್ನಡಪರ ಸಂಘಟನೆಗಳಲ್ಲಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts