More

    ಮರೆತುಬಿಡು ಎಂದಿದ್ದಕ್ಕೆ ಪ್ರೇಯಸಿಯನ್ನೇ ಕೊಂದ

    ಬೆಳಗಾವಿ: ಇಲ್ಲಿನ ಬಸವ ಕಾಲನಿಯ ಮನೆಯೊಂದರಲ್ಲಿ ಪ್ರೇಯಸಿಯ ಕತ್ತು ಬಿಗಿದು ಕೊಲೆ ಮಾಡಿದ ಪ್ರೇಮಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

    ಸವದತ್ತಿ ತಾಲೂಕಿನ ಬೂದಿಗೊಪ್ಪ ಗ್ರಾಮದ ರಾಮಚಂದ್ರ ಬಸಪ್ಪ ತೇಣಗಿ (29), ಮದ್ಲೂರ ಮೂಲದ ರೇಣುಕಾ ಕೆಂಚಪ್ಪ ಪಂಚಣ್ಣವರ (30) ಮೃತಪಟ್ಟವರು.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ ಮಾಡುತ್ತಿದ್ದ ರಾಮಚಂದ್ರ ಹಾಗೂ ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ರೇಣುಕಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ರಾಮಚಂದ್ರ ತೆಣಗಿ ವಿವಿ ವಸತಿ ನಿಲಯದಲ್ಲಿ ವಾಸವಾಗಿದ್ದ, ರೇಣುಕಾ ಬಸವ ಕಾಲನಿಯ ಮನೆಯೊಂದರಲ್ಲಿ ಒಬ್ಬಳೇ ಬಾಡಿಗೆ ಮಾನೆಯಲ್ಲಿದ್ದಳು. ಗುರುವಾರ ರಾತ್ರಿ ಪ್ರೇಮಿಗಳಿಬ್ಬರೂ ಇದೇ ಬಾಡಿಗೆ ಮನೆಯಲ್ಲಿ ಸೇರಿದ್ದರು. ನನ್ನನ್ನು ಮರೆತುಬಿಡು ಎಂದು ರೇಣುಕಾ ಹೇಳಿದ್ದರಿಂದ ಈ ಕೃತ್ಯ ಎಸಗಿರುವುದಾಗಿ ರಾಮಚಂದ್ರ ಡೆತ್‌ನೋಟ್‌ನಲ್ಲಿ ಬರೆದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಾಮಚಂದ್ರ ತನ್ನ ಸೋದರ ಮಾವನಿಗೆ ರಾತ್ರಿ ಮೆಸೇಜ್ ಹಾಕಿದ್ದ ಎಂದು ತಿಳಿದು ಬಂದಿದೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts