More

    ಮನೆ ಮೇಲೆ ಕನ್ನಡ ಬಾವುಟ ಹಾರಿಸಿ

    ಅಥಣಿ, ಬೆಳಗಾವಿ: ಎಲ್ಲರೂ ಕನ್ನಡ ಧ್ವಜವನ್ನು ಮನೆ ಮೇಲೆ ಹಾರಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವ ಆಚರಿಸಬೇಕು ಎಂದು ಪುರಸಭೆ ಸದಸ್ಯ ರಾವಸಾಹೇಬ ಐಹೊಳೆ ಕರೆ ನೀಡಿದರು. ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದಿಂದ ಶುಕ್ರವಾರ ಹಮ್ಮಿಕೊಂಡ ‘ನಮ್ಮ ನಾಡು ನಮ್ಮ ಬಾವುಟ, ಪ್ರತಿಯೊಬ್ಬರ ಮನೆಯ ಮೇಲೆ ಹಾರಲಿ ಕನ್ನಡ ಬಾವುಟ’ ಎಂಬ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಯಕ್ರಮವು ಕನ್ನಡಿಗರಿಗೆ ಸ್ಫೂರ್ತಿಯ ಸೆಲೆಯಾಗಿ ಎಲ್ಲೆಡೆ ಪಸರಿಸಲಿ ಎಂದರು.

    ರಾಜ್ಯ ಕಾರ್ಯದರ್ಶಿ ರವಿ ಪೂಜಾರಿ ಮಾತನಾಡಿದರು. ಪಟ್ಟಣದ ಶಿವಯೋಗಿ ವೃತ್ತದಿಂದ ಆರಂಭವಾದ ಜನಜಾಗೃತಿ ಜಾಥಾ ಅಂಬೇಡ್ಕರ್ ವೃತ್ತದ ಮುಖ್ಯ ಬೀದಿ, ಬಸವೇಶ್ವರ ವೃತ್ತ, ಶಿವಾಜಿ ವೃತ್ತಗಳಲ್ಲಿ ಸಂಚರಿಸಿತು. ವ್ಯಾಪಾರಸ್ಥರಿಗೆ ಮತ್ತು ನಾಗರಿಕರಿಗೆ ಕನ್ನಡ ನಾಮಫಲಕ ಅಳವಡಿಸುವಂತೆ ಜಾಗೃತಿ ಮೂಡಿಸಲಾಯಿತು. ಎ.ಎಸ್. ತೆಲಸಂಗ, ಜಗು ಬಾಮನೆ, ಸಿದ್ದು ಹಂಡಗಿ, ವಿಜಯ ಹುದಾರ, ವಿನಯ ಪಾಟೀಲ, ಉದಯ ಮಾಕಾಣಿ, ಸುಕುಮಾರ ಮಾದರ, ಶಂಕರ ಮಗದುಮ್ಮ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts