More

    ಮನೆಗೆ ತೆರಳಲು ವಾಹನ ಸಿಗದೇ ಕುಸಿದು ಬಿದ್ದ ಬಾಣಂತಿ

    ಮುಂಡಗೋಡ: ಆಸ್ಪತ್ರೆಯಿಂದ ಬಿಡುಗಡೆಯಾದ ಬಾಣಂತಿಯೊಬ್ಬಳು ಮನೆಗೆ ತೆರಳಲು ವಾಹನ ಸಿಗದೇ ನಡೆದೂ- ನಡೆದೂ ಸುಸ್ತಾಗಿ ಕುಸಿದು ಬಿದ್ದ ಘಟನೆ ಶನಿವಾರ ನಡೆದಿದೆ.

    ಸುಮಾರು 13 ಕಿ.ಮೀ.ದೂರದ ಹುಲಿಹೊಂಡ ಗ್ರಾಮದ ಗಂಗೂಬಾಯಿ ಎಂಬ 20 ವರ್ಷದ ಮಹಿಳೆ ತೊಂದರೆಗೀಡಾದವರು. ಅವರಿಗೆ ಮನೆಯಲ್ಲೇ ಹೆರಿಗೆಯಾಗಿ ಮಗು ಸಾವನ್ನಪ್ಪಿತ್ತು. ಚಿಕಿತ್ಸೆಗಾಗಿ ಐದು ದಿನದ ಹಿಂದೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

    ಶನಿವಾರ ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಆಕೆಯನ್ನು ಮನೆಗೆ ತಲುಪಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡದೇ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಆಟೋ ಅಥವಾ ಬೇರ್ಯಾವುದೇ ವಾಹನ ಸಿಗದ ಕಾರಣ ನಡೆದು ಮನೆಯತ್ತ ಹೊರಟ ಆಕೆ ಮಗು ಸತ್ತ ದುಃಖ ಹಾಗೂ ಸುಸ್ತಿನಿಂದ ಬಸ್ ನಿಲ್ದಾಣದ ಸಮೀಪ ಕುಸಿದು ಬಿದ್ದರು.

    ಪತ್ರಕರ್ತರೊಬ್ಬರು ಅದನ್ನು ನೋಡಿ ಸಿಪಿಐ ಶಿವಾನಂದ ಚಲವಾದಿ ಅವರಿಗೆ ಸುದ್ದಿ ಮುಟ್ಟಿಸಿದರು. ಸ್ವಲ್ಪ ಸಮಯದ ನಂತರ ಚೇತರಿಸಿಕೊಂಡ ಗಂಗೂಬಾಯಿಯನ್ನು ಸಿಪಿಐ ತಮ್ಮ ವಾಹನದಲ್ಲೇ ಮನೆಗೆ ತಲುಪಿಸಿದ್ದಾರೆ.

    ಗಂಗೂಬಾಯಿ ಗಂಡ ಗೋವಾದಲ್ಲಿ ಕೆಲಸ ಮಾಡುತ್ತಿದ್ದು, ಲಾಕ್​ಡೌನ್​ನಿಂದ ಅವರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಗಂಗಮ್ಮ ತನ್ನ ಅತ್ತೆಯ ಜತೆ ಆಸ್ಪತ್ರೆ ಸೇರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts