More

    ಮಧು ಅವರನ್ನು ಸಂಪುಟದಿಂದ ಕೈಬಿಡಿ- ಶೀಘ್ರವೇ ಖರ್ಗೆಗೆ ದೂರು – ಪ್ರಣವಾನಂದ ಶ್ರೀಗಳು

    ದಾವಣಗೆರೆ: ದುರಂಹಕಾರಿ ಪ್ರವೃತ್ತಿಯುಳ್ಳ ಸಚಿವ ಮಧು ಬಂಗಾರಪ್ಪ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ನಾರಾಯಣಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದರು.
    ನನಗೆ ತಲೆ ಕೆಟ್ಟಿದೆ ಎಂಬುದಾಗಿ ಮಧು ಬಂಗಾರಪ್ಪ ಟೀಕಿಸಿದ್ದಾರೆ. ತಲೆ ಕೆಟ್ಟಿರುವುದು ನನಗೋ ಅವರಿಗೋ ಎಂಬುದು ಜನರಿಗೆ ತಿಳಿದಿದೆ. ಚೆಕ್‌ಬೌನ್ಸ್ ಪ್ರಕರಣ ನನ್ನಿಂದ ಆಗಿಲ್ಲ. ಸಮಾಜದ ಜಾಗವನ್ನೂ ಕಬಳಿಸಿಲ್ಲ. ವಿದ್ಯಾಮಂತ್ರಿಯಾಗಿ ಈ ರೀತಿ ಮಾತನಾಡಬಾರದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
    ಶಿಕ್ಷಣ ಸಚಿವರಿಗೆ ಮನಸ್ಸಿಗೆ ವಿಭ್ರಾಂತಿ ಆಗಿದೆ. ಸಾಧು-ಸಂತರಿಗೆ ಗೌರವ ನೀಡದ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಆಗ್ರಹಿಸಿದರು. ಜ.6ರಂದು ನವದೆಹಲಿಗೆ ಭೇಟಿ ನೀಡಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯವರಿಗೆ ದಾಖಲೆ ಸಹಿತ ದೂರು ನೀಡುವುದಾಗಿ ಹೇಳಿದರು.
    ಚೆಕ್ ಅಮಾನ್ಯ ಪ್ರಕರಣದಲ್ಲಿ ಅವರು ಜೈಲಿಗೆ ಹೋಗುವ ಪರಿಸ್ಥಿತಿ ಬರಬಹುದು. ಅವರ ಹೊರತಾಗಿ ಸಮಾಜದ ಯಾರಿಗಾದರೂ ಸಚಿವ ಸ್ಥಾನ ನೀಡಿ ಎಂದು ಒತ್ತಾಯಿಸಿದರು. ಮುಂದಿನ ದಿನದಲ್ಲಿ ಮಧು ಬಂಗಾರಪ್ಪ ಅವರ ಭ್ರಷ್ಟಾಚಾರವನ್ನು ಬಹಿರಂಗ ಪಡಿಸುವುದಾಗಿಯೂ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts