More

    ಮದುವೆ ಮನೆಗೆ ಕನ್ನ ಹಾಕಿದ ಕಳ್ಳರು

    ಅಫಜಲಪುರ: ಮದುವೆ ಮನೆ ಸೇರಿ 4-5 ಮನೆಗಳಿಗೆ ಕಳ್ಳರು ಕನ್ನ ಹಾಕಿದ ಘಟನೆ ಪಟ್ಟಣದಲ್ಲಿ ಶುಕ್ರವಾರ ಜರುಗಿದೆ. ಸಂಗು ಡಿಜಿಟಲ್ ಪ್ರಿಂಟಿಂಗ್ ಪ್ರೆಸ್‌ನ ಮಾಲೀಕ ಸಂಗನಬಸಪ್ಪ ಪತ್ತಾರ್, ಸಿದ್ದು ಡಾಂಗೆ, ಕಿರಾನಂದ ಪತ್ತಾರ್, ಬಸವರಾಜ್ ನೂಲಾ ಅವರ ಮನೆಗಳಲ್ಲಿ ಕಳ್ಳತನವಾಗಿದೆ.

    ಸಂಗನಬಸಪ್ಪ ಪತ್ತಾರ್ ಅವರ ಪುತ್ರ ವಿನೋದ್ ಮದುವೆ ಶ್ರೀ ಗುರು ಮಳೇಂದ್ರ ಮಠದಲ್ಲಿ ಶುಕ್ರವಾರ ನಿಶ್ಚಯವಾಗಿದ್ದು, ಕುಟುಂಬದವರೆಲ್ಲ ಬೆಳಗ್ಗೆಯೇ ಕಲ್ಯಾಣ ಮಂಟಪಕ್ಕೆ ಹೋಗಿದ್ದಾರೆ. ಈ ಸಮಯಕ್ಕಾಗಿ ಕಾದು ಕುಳಿತಿದ್ದ ಕಳ್ಳರು 12ರ ಸುಮಾರಿಗೆ ಮನೆಗೆ ನುಗ್ಗಿ ಕೈಗೆ ಸಿಕ್ಕಿದ್ದನೆಲ್ಲ ದೋಚಿದ್ದಾರೆ. ಮದುವೆ ಬಳಿಕ ಮಧ್ಯಾಹ್ನ 1.30ರ ಸುಮಾರಿಗೆ ಕೆಲ ಹುಡುಗರು ಮನೆಗೆ ಬಂದಿದ್ದು, ಈ ವೇಳೆ ವಸ್ತುಗಳೆಲ್ಲ ಚಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಕೂಡಲೇ ಕುಟುಂಬದವರಿಗೆ ಮಾಹಿತಿ ನೀಡಿದ್ದು, ಎಲ್ಲರೂ ಮದುವೆ ಕಾರ್ಯಕ್ರಮ ಬಿಟ್ಟು ಮನೆಗೆ ವಾಪಸ್ ಆಗಿದ್ದಾರೆ. ಕಳ್ಳರ ಕೃತ್ಯವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಪತ್ತಾರ್ ಅವರ ಮನೆಯ ಬಳಿಕ ಸಿದ್ದು ಡಾಂಗೆ, ಕಿರಾನಂದ ಪತ್ತಾರ್, ಬಸವರಾಜ್ ನೂಲಾ ಅವರ ಮನೆಗಳಿಗೂ ನುಗ್ಗಿದ ಕಳ್ಳರು ಆಭರಣ ಹಾಗೂ ನಗದನ್ನು ದೋಚಿದ್ದಾರೆ. ಮಧ್ಯಾಹ್ನದ ವೇಳೆಯೇ 4-5 ಮನೆಗಳಲ್ಲಿ ಕಳ್ಳತನ ನಡೆದಿರುವುದು ಜನರಲ್ಲಿ ಭಯ ಮೂಡಿದೆ. ಮನೆ ಬಿಟ್ಟು ಹೊರಗೆ ಹೋಗೋದಕ್ಕು ಹಿಂಜರಿಯುತ್ತಿದ್ದಾರೆ.

    ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್‌ಐ ಭೀಮರಾಯ ಬಂಕ್ಲಿ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts