ಶಿವಮೊಗ್ಗ: ತಬ್ಲಿಗಳನ್ನು ಹಾಸ್ಟೆಲ್ಗಳ ಬದಲು ಮದರಸಾ ಅಥವಾ ದರ್ಗಾಗಳಲ್ಲಿ ಕ್ವಾರಂಟೈನ್ ಮಾಡಬೇಕು ಎಂದು ಎಂಎಲ್ಸಿ ಆಯನೂರು ಮಂಜುನಾಥ್ ಒತ್ತಾಯಿಸಿದರು.
ಕರೊನಾ ನಿಯಂತ್ರಣ ವಿಚಾರದಲ್ಲಿ ತಬ್ಲಿಗಳು ಆರಂಭದಿಂದಲೂ ದೇಶಾದ್ಯಂತ ಅಸಹಕಾರ ನೀಡá-ತ್ತಿದ್ದಾರೆ. ಚಿತ್ಸೆ ಮತ್ತು ಮಾಹಿತಿ ನೀಡá-ವಲ್ಲಿ ಅಸಹಕಾರ ತೋರುತ್ತಿದ್ದಾರೆ. ವೈರಸ್ ಅಪಾಯಕಾರಿ ಎಂದು ಗೊತ್ತಿದ್ದರೂ ಅದನ್ನು ಹರಡಲು ಯತ್ನಿಸá-ತ್ತಿದ್ದಾರೆ. ಹಾಗಾಗಿಯೇ ಸಾಮಾನ್ಯ ಜನರು ಅವರನ್ನು ಶಂಕೆಯಿಂದ ನೋಡá-ವಂತಾಗಿದೆ. ಚಿತ್ಸೆ ಮತ್ತು ಮಾಹಿತಿಗೆ ಅಸಹಕಾರ ತೋರುವವರ ವಿರá-ದ್ಧ ಕಠಿಣ ಕಾನೂನು ಕ್ರಮ ಜರá-ಗಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ತಪ್ಪಿಸಿಕೊಳ್ಳಲು ಯತ್ನಿಸಿದ್ರಾ ತಬ್ಲಿಘಿಗಳು? ಜಿಲ್ಲೆಯಿಂದ ತಬ್ಲಿಘಿ ಸಮಾವೇಶಕ್ಕೆ ಹೋಗಿದ್ದವರು ಕರೊನಾ ವೈರಸ್ನೊಂದಿಗೆ ಬಂದಿದ್ದಾರೆ. ಶನಿವಾರ ಬಾಪೂಜಿನಗರದ ಹಾಸ್ಟೆಲ್ನಿಂದ ಮಲ್ಲಿಗೇನಹಳ್ಳಿ ಹಾಸ್ಟೆಲ್ಗೆ ಸ್ಥಳಾಂತರಿಸುವ ವೇಳೆ ಇಬ್ಬರು ತಬ್ಲಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಅವರನ್ನು ಇನ್ಸ್ಪೆಕ್ಟರ್ವೊಬ್ಬರು ಹಿಡಿದು ಕರೆತಂದಿದ್ದಾರೆ ಎಂದು ಹೇಳಿದರು.
ತಬ್ಲಿಘಿ ಎಂದರೆ ಇಡೀ ಮುಸ್ಲಿಂ ಸಮುದಾಯ ಅಲ್ಲ. ಮುಸ್ಲಿಂ ಮತ್ತು ತಬ್ಲಿಗಳ ಆಚರಣೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಆದರೆ ತಬ್ಲಿಗಳ ವರ್ತನೆಯಿಂದ ಇಡೀ ಮುಸ್ಲಿಂ ಸಮá-ದಾಯವನ್ನೇ ಅನá-ಮಾನದಿಂದ ಜನರು ನೋಡá-ತ್ತಿದ್ದಾರೆ. ಇದರಿಂದ ದá-ಡಿದು ತಿನ್ನುತ್ತಿದ್ದ ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ಹೊಡೆತ ಬಿದ್ದಿದೆ. ಕೆಲವೇ ಕೆಲವರಿಂದ ಮುಸ್ಲಿಂ ಸಮುದಾಯಕ್ಕೆ ಅಪಾಯ ಬಂದೊದಗಿದೆ ಎಂದು ದೂರಿದರು. ಮಾಜಿ ಶಾಸಕ ಕೆ.ಜಿ.ಕá-ಮಾರಸ್ವಾಮಿ, ಎಚ್.ಸಿ.ಬಸವರಾಜಪ್ಪ, ಭದ್ರಾವತಿ ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್ ಇದ್ದರು.