More

    ಮತ್ತೆ ಆತಂಕ ಹುಟ್ಟಿಸಿದ ಭೂಕುಸಿತ

    ನರಗುಂದ: ಪಟ್ಟಣದ ಎರಡು ಮನೆಗಳಲ್ಲಿ ಮತ್ತೆ ಏಕಾಏಕಿ ಭೂಕುಸಿತ ಸಂಭವಿಸಿದ್ದು, ಕುಟುಂಬಸ್ಥರು ಹಾಗೂ ಬಡಾವಣೆಯವರು ನಿರಂತರವಾಗಿ ಆತಂಕದಲ್ಲಿ ಬದುಕುವಂತಾಗಿದೆ.

    ಪಟ್ಟಣದ ಶಂಕರಲಿಂಗ ಬಡಾವಣೆಯ ರಾಚಪ್ಪ ಸುನ್ನಾಳ ಎಂಬುವರ ಮನೆಯ ಹೊಸ್ತಿಲು ಕೆಳಗೆ ಹಾಗೂ ದಂಡಾಪೂರ ಹಗೇದಕಟ್ಟಿ ಬಡಾವಣೆಯ ಶಂಕರಗೌಡ ಪಾಟೀಲ ಎಂಬುವರ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ ಏಕಾಏಕಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಕುಟುಂಬಸ್ಥರು ಹಾಗೂ ಬಡಾವಣೆಯ ಜನರು ಭಯಭೀತರಾಗಿದ್ದಾರೆ.

    ಪಟ್ಟಣದ ಕೆಲ ಪ್ರಮುಖ ಬಡಾವಣೆಗಳಲ್ಲಿ ನಿರಂತರವಾಗಿ ಈ ಭೂಕುಸಿತದ ಘಟನೆಗಳು ಸಂಭವಿಸುತ್ತಿವೆ. ಆದರೆ, ಜಿಲ್ಲಾಡಳಿತವಾಗಲಿ ಅಥವಾ ತಾಲೂಕಾಡಳಿತ ಮಾತ್ರ ಈ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದು ಪಟ್ಟಣದ ಸಾರ್ವಜನಿಕರಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಭೂಕುಸಿತದ ಘಟನಾ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಕಿರಿಯ ಆರೋಗ್ಯ ಸಹಾಯಕಿ ಪ್ರೀತಿ ಗವಿಮಠ ಭೇಟಿ ನೀಡಿ ಪರಿಶೀಲನೆ ನಡೆಸಿ, ಪುರಸಭೆ ಸಿಬ್ಬಂದಿ ಭೂಕುಸಿತದ ಎರಡು ಗುಂಡಿಗಳನ್ನು ಮುಚ್ಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts