ಚಿತ್ರದುರ್ಗ: ಮತದಾರರ ಪಟ್ಟಿಗೆ ಹೆಸರು ಸೇರಿಸುವ ವಿಶೇಷ ಅಭಿಯಾನ ಭಾನುವಾರ ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ, ಜೆ.ಎನ್.ಕೋಟೆ, ಕುಂಚಿಗನಾಳ್, ಗೊಲ್ಲರಹಟ್ಟಿ ಸೇರಿ ವಿವಿಧೆಡೆ ನಡೆಯಿತು.
ಮತಗಟ್ಟೆಗಳಿಗೆ ತೆರಳಿ ಬಿಎಲ್ಒಗಳಿಂದ ಮಾಹಿತಿ ಪಡೆದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಪರಿಶೀಲನೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ತಹಸೀಲ್ದಾರ್ ನಾಗವೇಣಿ ಇತರರಿದ್ದರು.