More

    ಮಟ್ಟೂರು ಗೆಲುವು ಖಂಡ್ರೆ ವಿಶ್ವಾಸ

    ಕಲಬುರಗಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶರಣಪ್ಪ ಮಟ್ಟೂರ ಅವರನ್ನು ಮತ್ತೊಮ್ಮೆ ಗೆಲ್ಲಿಸಲು ಎಲ್ಲ ಕಾರ್ಯಕರ್ತರು ಟೊಂಕಕಟ್ಟಿ ನಿಂತುಕೊಂಡು ಕೆಲಸ ಮಾಡಬೇಕು. ಅಲ್ಲದೆ ಪ್ರತಿಯೊಬ್ಬ ಶಾಸಕರು ಮತ್ತು ಮಾಜಿ ಶಾಸಕರು ಮತದಾರರನ್ನು ಕರೆ ತಂದು ಮತ ಹಾಕಿಸಲು ಸಮಿತಿಗಳನ್ನು ರಚಿಸುವ ಮೂಲಕ ಅವರಿಗೆ ಹೊಣೆಯನ್ನು ವಹಿಸಿಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.
    ಶಿಕ್ಷಕರ ಕ್ಷೇತ್ರದ ವಿಧಾನಸಭೆ ಚುನಾವಣೆಯ ಅಭ್ಯರ್ಥಿ ಶರಣಪ್ಪ ಮಟ್ಟೂರ ಪರ ಪ್ರಚಾರ ಹಿನ್ನೆಲೆಯಲ್ಲಿ ಮತ್ತು ಗೆಲುವಿನ ತಂತ್ರ ರೂಪಿಸಲು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಶಿಕ್ಷಕ ಮತದಾರರನ್ನು ನಿರಂತರವಾಗಿ ಸಂಪರ್ಕದಲ್ಲಿರುವ ಮೂಲಕ ಮತ ಚಲಾಯಿಸಲು ಕರೆದುಕೊಂಡು ಬರಬೇಕು. ಈ ಕೆಲಸವನ್ನು ಅತ್ಯಂತ ಕಾಳಜಿ ಮತ್ತು ಶ್ರದ್ದೆಯಿಂದ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಸೂಚಿಸಿದರು.
    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಸಭೆಯ ಮುಖ್ಯಸಚೇತಕ ಡಾ.ಅಜಯಸಿಂಗ್, ಮಾಜಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಶಾಸಕರಾದ ಎಂ.ವೈ.ಪಾಟೀಲ್, ಕನ್ನೀಜ್ ಫಾತಿಮಾ, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ವಿಜಯಕುಮಾರ ಜಿ.ರಾಮಕೃಷ್ಣ, ಸುಭಾಷ ರಾಠೋಡ ಮಾತನಾಡಿದರು.
    ಪ್ರಮುಖರಾದ ಡಾ.ಕಿರಣ ದೇಶಮುಖ, ಪ್ರವೀಣ ಹರವಾಳ, ಲತಾ ರವಿ ರಾಠೋಡ, ಶರಣಕುಮಾರ ಮೋದಿ, ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಶಿವಾನಂದ ಪಾಟೀಲ್, ಹುಲಿಗೆಪ್ಪ ಕನಕಗಿರಿ, ಚೇತನಕುಮಾರ ಗೋನಾಯಕ, ಕಾಶೀರಾಯಗೌಡ ಯಲಗೋಡ,ಹಣಮಂತ ಭೂಸನೂರ, ಮಹೇಶ್ವರಿ ವಾಲಿ,ವಾಣಿಶ್ರೀ ಸಗರಕರ್, ರೇಣುಕಾ ಸಿಂಗೆ ಮೊಲಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts