ಮಂಗಳೂರು: ಕರ್ತವ್ಯದ ಹೊತ್ತಿನಲ್ಲಿ ಮಂಗಳೂರು ಹೊರವಲಯದ
ಕುತ್ತಾರು ಬಳಿ ಬಾರ್ನಲ್ಲಿ ಮಂಗಳೂರು ಸಿಸಿಬಿ ಪೊಲೀಸರ ಗುಂಡು ಪಾರ್ಟಿ
ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ತನಿಖೆಗೆ
ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶಿಸಿದ್ದಾರೆ. ಡಿಸಿಪಿ ಹರಿರಾಂ
ಶಂಕರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ತನಿಖೆಗೆ ಹಾಜರಾಗುವಂತೆ
ಗುಂಡು ಪಾರ್ಟಿಯಲ್ಲಿದ್ದ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಮಂಗಳೂರು ಹೊರವಲಯದ ಕುತ್ತಾರು ಬಳಿಯ ಬಾರ್ನಲ್ಲಿ ಬುಧವಾರ ಮಧ್ಯಾಹ್ನ ಈ
ಗುಂಡು ಪಾರ್ಟ್ ನಡೆಸಿದೆ ಎಂದು ಹೇಳಲಾಗಿದೆ. ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ
ಜೊತೆ ಹಾಡಹಗಲೇ ಪಾರ್ಟಿ ಮಾಡಿದ್ದ ಆರೋಪವಿದೆ. ಹೊರಗೆ ಸರ್ಕಾರಿ ಟಿಟಿ ವಾಹನ
ನಿಲ್ಲಿಸಿ ಬಾರ್ನಲ್ಲಿ ಸಿಸಿಬಿಯ ಎಂಟು ಮಂದಿ ಸಿಬ್ಬಂದಿ ಪಾರ್ಟಿ ಮಾಡಿದ್ದಾರೆ. ಇದರ ವಿಡಿಯೋ
ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಅವರು
ತನಿಖೆಗೆ ಆದೇಶಿಸಿದ್ದಾರೆ. ಈ ವಿಡಿಯೋ ಅಧಾರದಲ್ಲಿ ತನಿಖೆಗೆ ಹಾಜರಾಗುವಂತೆ
ಸಿಬ್ಬಂದಿಗೆ ತನಿಖಾಧಿಕಾರಿ ಸೂಚನೆ ನೀಡಿದ್ದಾರೆ.