More

    ಭೀಕರ ಅಪಘಾತದಲ್ಲಿ ಮೂವರ ಸ್ಥಿತಿ ಗಂಭೀರ

    ತರೀಕೆರೆ: ತಾಲೂಕಿನ ದುಗ್ಲಾಪುರ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಟ್ರಕ್, ಆಟೋ ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತದಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, 10 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಟ್ರ್ಯಾಕ್ಟರ್​ನಲ್ಲಿದ್ದ ದೋರನಾಳು ಗ್ರಾಮದ ಲೋಕೇಶ್(50), ಅಜ್ಜಂಪುರದ ಮಲ್ಲಿಕಾರ್ಜುನ (28), ಟ್ರಕ್ ಚಾಲಕ ಯಲ್ಲಯ್ಯ ಅವರಿಗೆ ತೀವ್ರ ಗಾಯವಾಗಿದೆ.

    ಬುಧವಾರ ಚಾಕೋನಹಳ್ಳಿಯಿಂದ ಲಕ್ಕವಳ್ಳಿ ಕಡೆ ಅಡಕೆ ಕೆಲಸಕ್ಕೆ ಕೃಷಿ ಕಾರ್ವಿುಕರು ಟ್ರ್ಯಾಕ್ಟರ್​ನಲ್ಲಿ ತೆರಳುತ್ತಿದ್ದರು. ದುಗ್ಲಾಪುರ ಸಮೀಪ ಟ್ರಕ್, ಟ್ರ್ಯಾಕ್ಟರ್ ಮತ್ತು ಆಟೋಗಳು ಚಾಲಕರ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದುಕೊಂಡಿವೆ. ಟ್ರ್ಯಾಕ್ಟರ್​ನ ಮುಂಭಾಗ ಟ್ರಕ್ ಅಡಿ ಸಿಲುಕಿ ನಜ್ಜುಗುಜ್ಜಾಗಿದೆ. ಸಣ್ಣಪುಟ್ಟ ಗಾಯಗಳಾದ 8 ಮಂದಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಮೂವರನ್ನೂ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts