ಹಿರೇಕೆರೂರ: ಆಕಸ್ಮಿಕವಾಗಿ ಬೆಂಕಿ ತಗುಲಿ ಮೇವಿನ ಬಣವೆಗಳು, ಕೃಷಿಗೆ ಸಂಬಂಧಿಸಿದ ಪೈಪ್ಗಳು ಸುಟ್ಟು ಕರಕಲಾದ ಘಟನೆ ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಗ್ರಾಮದ ಜಯಪ್ಪ ಪೂಜಾರ ಅವರ ಜಮೀನಿನ ಕಣದಲ್ಲಿರಿಸಿದ್ದ 1 ಹುಲ್ಲಿನ ಬಣವೆ, 3 ಎಕರೆಯಲ್ಲಿ ಬೆಳೆದ ಬಿಳಿಸೊಪ್ಪಿನ ಮೇವಿನ ಬಣವೆ, 5 ಎಕರೆ ಮೆಕ್ಕೆಜೋಳದ ಸೊಪ್ಪಿನ ಬಣವೆ, 50 ಪೈಪ್ಗಳು, ಸೀಡ್ಸ್ ಕಂಬಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಿದರು. 1 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.