More

    ಬಿಜೆಪಿಯಿಂದ ದೂರ ಉಳಿದವರನ್ನು ವಿಶ್ವಾಸಕ್ಕೆ ಪಡೆಯಿರಿ: ಮುಖಂಡರಿಗೆ ಬಿ.ವೈ.ರಾಘವೇಂದ್ರ ಸೂಚನೆ

    ಶಿಕಾರಿಪುರ: ಕಾರ್ಯಕರ್ತರೇ ಪಕ್ಷದ ಜೀವಾಳ. ಕಾರ್ಯಕರ್ತರ ಪರಿಶ್ರಮದಿಂದ ದೇಶದಲ್ಲಿ ಅತಿಹೆಚ್ಚು ಸದಸ್ಯರನ್ನು ಹೊಂದಿದ ದೊಡ್ಡ ಪಕ್ಷವಾಗಿ ಬಿಜೆಪಿ ಬೆಳೆದಿದೆ. ಪಕ್ಷ ಬೆಳೆದಂತೆ ನಾವೂ ಬೆಳೆಯುತ್ತೇವೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
    ಬಿಜೆಪಿ ನಗರ ಘಟಕ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಂಘಟನಾತ್ಮಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಸಂಘಟನೆಯ ಕಡೆಗೆ ಗಮನ ಕೊಡಬೇಕು. ಪಕ್ಷವನ್ನು ಬೆಳೆಸಿದ ಹಿರಿಯರ ಸಲಹೆ, ಮಾರ್ಗದರ್ಶನ ಪಡೆಯಬೇಕು. ಸಣ್ಣ ಸಣ್ಣ ವಿಚಾರಗಳಿಗಾಗಿ ಪಕ್ಷದ ಚಟುವಟಿಕೆಯಿಂದ ದೂರವಿರುವ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪ್ರತಿ ವಾರ್ಡ್‌ಗಳು ಗಟ್ಟಿಯಾದಾಗ ಮಾತ್ರ ಪಕ್ಷ ಸದೃಢವಾಗುತ್ತದೆ. ನಮ್ಮ ಗುರಿ ಪಕ್ಷವನ್ನು ಬಲಪಡಿಸುವುದಾಗಬೇಕು ಎಂದರು.
    ಪ್ರಕೃತಿ ವ್ಯತ್ಯಯ ಮತ್ತು ಬರಗಾಲದಿಂದ ತತ್ತರಿಸಿಹೋಗಿದ್ದ ಶಿಕಾರಿಪುರ ತಾಲೂಕಿನಲ್ಲಿ ಕಾಲಕಾಲಕ್ಕೆ ಮಳೆಯಾಗದೆ ರೈತರಿಗೆ ತೊಂದರೆಯಾಗಿತ್ತು. ಒಂದು ಕಾಲದಲ್ಲಿ ಭತ್ತದ ಕಣಜ ಎಂದೇ ಖ್ಯಾತಿಯಾಗಿದ್ದ ಶಿಕಾರಿಪುರ ತಾಲೂಕಿನಲ್ಲಿ ನೀರಾವರಿ ವ್ಯವಸ್ಥೆ ಇಲ್ಲದೆ ರೈತರು ಮೆಕ್ಕೆಜೋಳ ಬೆಳೆಯತೊಡಗಿದರು. ಯಡಿಯೂರಪ್ಪ ಅವರ ಇಚ್ಛಾಶಕ್ತಿ ಫಲವಾಗಿ ತಾಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಯಡಿಯೂರಪ್ಪ ಹೋರಾಟಗಳೇ ನಮಗೆ ಸದಾ ಸ್ಫೂರ್ತಿ ಎಂದು ಹೇಳಿದರು.
    ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಗಟ್ಟಿಯಾಗಿ ಜನಮನದಲ್ಲಿ ನೆಲೆ ನಿಂತಿದೆ. ಯಡಿಯೂರಪ್ಪ ಅವರ ಜನಹಿತ ಬಯಸುವ ಹೋರಾಟಗಳು, ಪಾದಯಾತ್ರೆಗಳು ಮತ್ತು ಸಂಘಟನಾ ಬಲದಿಂದ ಪಕ್ಷ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರುವಂತಾಯಿತು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts