ಉಳ್ಳಾಗಡ್ಡಿ&ಖಾನಾಪುರ: ಸಮೀಪದ ನರಸಿಂಗಪುರ ಗ್ರಾಮದ ಬಳಿ ಬುಧವಾರ ರಾಜ್ಯ ರಸ್ತೆ ಸಾರಿಗೆ ಬಸ್ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಬಾಲಕ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.
ಮಹಾರಾಷ್ಟ್ರದ ಸತರಾ ಜಿಲ್ಲೆಯ ನಡೋಜಿ ಗ್ರಾಮದ ಸಿದ್ಧಿಕ್ ಸಾಧಿಕ್ ಮುಲ್ಲಾ (6) ಮೃತ ಬಾಲಕ. ಅದೇ ಗ್ರಾಮದ ಸಾಧಿಕ್ ಮುಲ್ಲಾ, ಜಾವೇದ್ ಮುಲ್ಲಾ, ಜಲ್ ಮುಲ್ಲಾ, ಅಲಿನಾ ಮುಲ್ಲಾ ಹಾಗೂ ಶಿರಿನ್ ಮುಲ್ಲಾ ಗಾಯಗೊಂಡವರು.
ಬೆಳಗಾವಿಯಿಂದ ಸಂಕೇಶ್ವರದತ್ತ ಹೊಗುತ್ತಿದ್ದ ಬಸ್ ನರಸಿಂಗಪುರ ಬಳಿ ನಿಂತಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಯಮಕನಮರಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.