More

    ಬನವಾಸಿಯಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲು ಮನವಿ

    ವಿಜಯವಾಣಿ ಸುದ್ದಿಜಾಲ ಶಿರಸಿ: ತಾಲೂಕಿನ ಬನವಾಸಿಯು ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ಕರೊನಾ ಭೀತಿ ಹಿನ್ನೆಲೆಯಲ್ಲಿ ಬನವಾಸಿಯಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲು ಸ್ಥಳೀಯ ಪ್ರಮುಖರು ಆರೋಗ್ಯಾಧಿಕಾರಿಗಳಿಗೆ ಮಂಗಳವಾರ ಮನವಿ ಅರ್ಪಿಸಿದರು.

    ಈ ಕುರಿತು ರಾಜ್ಯ, ಹೊರರಾಜ್ಯದಿಂದ ಪ್ರವಾಸಿಗರು ನಿತ್ಯ ಬರುತ್ತಿರುತ್ತಾರೆ. ಬನವಾಸಿಯಲ್ಲಿ ಎಲ್ಲ ಸಮುದಾಯದ ಜನರಿದ್ದು, ಅವರ ಮನೆಗೆ ಹೊರಗಿನಿಂದ ಜನರು ಬರುತ್ತಾರೆ. ಕರೊನಾ ರೋಗ ತಡೆ ದೃಷ್ಟಿಯಿಂದ, ಮುಂಜಾಗ್ರತಾ ರೋಗ ಪತ್ತೆಗೆ ಸ್ಕ್ರೀನಿಂಗ್ ವ್ಯವಸ್ಥೆ ಅಗತ್ಯವಿದೆ. ಆದರೆ ಈ ವ್ಯವಸ್ಥೆ ತಾಲೂಕ ಮಟ್ಟದಲ್ಲಿದ್ದು, ಬನವಾಸಿಗೂ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆ ಮಾಡಬೇಕು. ನಿರ್ವಹಣೆಗೆ ಹೆಚ್ಚಿನ ಸಿಬ್ಬಂದಿ ಹಾಕಬೇಕೆಂದು ಒತ್ತಾಯಿಸಿದರು.

    ಈ ವೇಳೆ ಪ್ರಮುಖರಾದ ದೀಪಕ ಬಂಗ್ಲೆ, ಬಿ.ಶಿವಾಜಿ, ವಿ.ಎಂ. ಶೆಟ್ಟರ್, ಶ್ರೀಕಾಂತ ಶೆಟ್ಟಿ, ಮುದ್ದಪ್ಪ ನಾಯ್ಕ, ಗಜಾನನ ಗೌಡ, ರವಿ ಕೊಳೆಕರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts