ಶೃಂಗೇರಿ: ಎಡೆಬಿಡದೆ ಸುರಿಯುತ್ತಿರುವ ಮಳೆ ಅಡಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಕೊಳೆರೋಗ ತಗುಲಿರುವುದರಿಂದ ತುರ್ತಾಗಿ ಬೋಡೋ ದ್ರಾವಣ ಸಿಂಪಡಿಸಬೇಕಿದ್ದು, ಇದಕ್ಕಾಗಿ ಫೈಬರ್ ದೋಟಿ ಖರೀದಿಗೆ ಸಹಾಯ ಧನ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಜೂನ್ ಮೊದಲ ವಾರದಿಂದ ಬೋಡೋ ದ್ರಾವಣ ಸಿಂಪಡಿಸಲಾಗುತ್ತದೆ. ಈ ಬಾರಿ ಅತಿಯಾಗಿ ಸುರಿದ ಮಳೆಯಿಂದ ಮೊದಲ ಹಂತದಲ್ಲಿ ಸಿಂಪಡಿಸಲು ಸಾಧ್ಯವಾಗಲಿಲ್ಲ. ಇದರಿಂದ ಅಡಕೆ, ಕಾಫಿ ಸಹಿತ ತೋಟಗಾರಿಕೆ ಬೆಳೆಗಳಿಗೆ ಕೊಳೆರೋಗ ಬಾಧಿಸುತ್ತಿದೆ.
ಮಲೆನಾಡಲ್ಲಿ ಅಡಕೆ ಮರಗಳಿಗೆ ಸಾಮಾನ್ಯವಾಗಿ ಕಾರ್ವಿುಕರನ್ನು ಬಳಸಿ ಬೋಡೋ ಸಿಂಪಡಿಸುತ್ತಾರೆ. ಆದರೆ ಈ ಬಾರಿ ಸ್ಥಿತಿವಂತ ಕೆಲ ಬೆಳೆಗಾರರು ಫೈಬರ್ ದೋಟಿ ಬಳಸಿ ಸಿಂಪಡಿಸುತ್ತಿದ್ದಾರೆ. ಆದರೆ ದೋಟಿ ಕೊಳ್ಳಲು 30-50 ಸಾವಿರ ರೂ. ಬೇಕಿದ್ದು ಸಣ್ಣ ರೈತರಿಗೆ ಸಮಸ್ಯೆಯಾಗಿದೆ.
ಮಳೆಗಾಲದಲ್ಲಿ ಅಡಕೆ ಮರ ಏರುವುದು ಸುಲಭದ ಮಾತಲ್ಲ. ಮುಂಗಾರು ಆರಂಭದಲ್ಲೇ ಬೋಡೋ ಸಿಂಪಡಣೆ ಮಾಡಬೇಕು. ಆದರೆ ಈ ಸಂದರ್ಭದಲ್ಲಿ ನುರಿತ ಕಾರ್ವಿುಕರು ಸಿಗುವುದು ಕಷ್ಟ. ಫೈಬರ್ ದೋಟಿ ಬಳಸುವುದರಿಂದ ಕಾರ್ವಿುಕರ ಮೇಲಿನ ಅವಲಂಬನೆ ತಪ್ಪಲಿದ್ದು, ಮನೆಯವರೇ ಸಿಂಪಡಿಸಬಹುದು. ಆದರೆ ಫೈಬರ್ ದೋಟಿ ದುಬಾರಿಯಾಗಿರುವುದರಿಂದ ಕಾರ್ವಿುಕರನ್ನೇ ಅವಲಂಬಿಸಬೇಕಿದೆ. ಸಕಾಲಕ್ಕೆ ಔಷಧ ಸಿಂಪಡಣೆ ಸಾಧ್ಯವಾಗದೆ ಫಸಲು ಕೂಡ ಕೈತಪ್ಪುತ್ತಿದೆ.