More

    ಪ್ರತಿ ಮನೆ ಮೇಲೆ ತ್ರಿವರ್ಣ ಧ್ವಜ ಹಾರಾಡಲಿ – ಶಾಸಕ ಪಿ.ರಾಜೀವ್​

    ಮುಗಳಖೋಡ: ಹರ್​ ರ್​ ತಿರಂಗಾ ಅಭಿಯಾನವನ್ನು ನಾವೆಲ್ಲ ಹೆಮ್ಮೆಯಿಂದ ಆಚರಿಸಬೇಕು ಎಂದು ಶಾಸಕ ಪಿ.ರಾಜೀವ್​ ಹೇಳಿದರು.

    ಇಲ್ಲಿನ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್​ಗಳಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

    ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜ ಹಾರಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಹರ್​ ರ್​ ತಿರಂಗಾ ಆಂದೋಲನಕ್ಕೆ ಪ್ರಧಾನಿ ಕರೆ ಕೊಟ್ಟಿದ್ದು ಸ್ವಾಗತಾರ್ಹ ಎಂದರು.

    ಪುರಸಭೆ ಸದಸ್ಯರಾದ ರಾಜಶೇಖರ ನಾಯಕ, ಹಾಲಪ್ಪ ಶೇಗುಣಸಿ, ಮಹಾಂತೇಶ ಯಾರಡೆತ್ತಿ, ಲಕ್ಷಿ$್ಮಬಾಯಿ ಸೇಗುಣಿಸಿ, ಸಾವಿತ್ರಿ ಯರಡೆತ್ತಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡರ, ಬಿಜೆಪಿ ಜಿಲ್ಲಾ ಉಪಾಧ್ಯೆ ಲತಾ ಹುದ್ದಾರ, ಕುಡಚಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಗಲಾ ಪಣದಿ, ನಂಜುಂಡಿ ಮಾಂಜರಿ, ಗುತ್ತಿಗೆದಾರ ರಫೀಕ್​ ತರಡೆ, ಹನುಮಂತ ಶೇಗುಣಶಿ, ರಾಮಣ್ಣ ಹೊಸಪೇಟಿ, ರಾಮನಗೌಡ ಕೇತಗೌಡರ, ಸಚಿನ್​ ಪ್ರಧಾನಿ, ಸಂಗಪ್ಪ ಹೊಸಪೇಟಿ, ಭೀಮಪ್ಪ ಯಡವನ್ನವರ, ಪರಪ್ಪ ಕಡಪಟ್ಟಿ, ಚಯಲ್ಲಪ್ಪ ಕೇತಗೌಡರ, ಮಲ್ಲಪ್ಪ ಈಟಿ, ಸಿದ್ದರಾಮ ಶೇಗುಣಸಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts