ಮುಗಳಖೋಡ: ಹರ್ ರ್ ತಿರಂಗಾ ಅಭಿಯಾನವನ್ನು ನಾವೆಲ್ಲ ಹೆಮ್ಮೆಯಿಂದ ಆಚರಿಸಬೇಕು ಎಂದು ಶಾಸಕ ಪಿ.ರಾಜೀವ್ ಹೇಳಿದರು.
ಇಲ್ಲಿನ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜ ಹಾರಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಹರ್ ರ್ ತಿರಂಗಾ ಆಂದೋಲನಕ್ಕೆ ಪ್ರಧಾನಿ ಕರೆ ಕೊಟ್ಟಿದ್ದು ಸ್ವಾಗತಾರ್ಹ ಎಂದರು.
ಪುರಸಭೆ ಸದಸ್ಯರಾದ ರಾಜಶೇಖರ ನಾಯಕ, ಹಾಲಪ್ಪ ಶೇಗುಣಸಿ, ಮಹಾಂತೇಶ ಯಾರಡೆತ್ತಿ, ಲಕ್ಷಿ$್ಮಬಾಯಿ ಸೇಗುಣಿಸಿ, ಸಾವಿತ್ರಿ ಯರಡೆತ್ತಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡರ, ಬಿಜೆಪಿ ಜಿಲ್ಲಾ ಉಪಾಧ್ಯೆ ಲತಾ ಹುದ್ದಾರ, ಕುಡಚಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಗಲಾ ಪಣದಿ, ನಂಜುಂಡಿ ಮಾಂಜರಿ, ಗುತ್ತಿಗೆದಾರ ರಫೀಕ್ ತರಡೆ, ಹನುಮಂತ ಶೇಗುಣಶಿ, ರಾಮಣ್ಣ ಹೊಸಪೇಟಿ, ರಾಮನಗೌಡ ಕೇತಗೌಡರ, ಸಚಿನ್ ಪ್ರಧಾನಿ, ಸಂಗಪ್ಪ ಹೊಸಪೇಟಿ, ಭೀಮಪ್ಪ ಯಡವನ್ನವರ, ಪರಪ್ಪ ಕಡಪಟ್ಟಿ, ಚಯಲ್ಲಪ್ಪ ಕೇತಗೌಡರ, ಮಲ್ಲಪ್ಪ ಈಟಿ, ಸಿದ್ದರಾಮ ಶೇಗುಣಸಿ ಇತರರು ಇದ್ದರು.