More

    ಪೊಲೀಸರ ಭರ್ಜರಿ ಬೇಟೆ, ಲಾರಿಗಟ್ಟಲೆ ಬೈಕ್ ವಶ ಖತರನಾಕ್ ಬೈಕ್ ಕಳ್ಳರ ಬಂಧನ

    ವಿಜಯಪುರ: ಖತರನಾಕ್ ಬೈಕ್ ಕಳ್ಳರನ್ನು ಬಂಧಿಸಿರುವ ಪೊಲೀಸರು ಅವರಿಂದ ಲಾರಿಗಟ್ಟಲೆ ಬೈಕ್ ವಶಕ್ಕೆ ಪಡೆದಿದ್ದಾರೆ.
    ಬರೋಬ್ಬರಿ ಐವತ್ತು ಮೋಟರ್ ಸೈಕಲ್ ವಶಕ್ಕೆ ಪಡೆಯಲಾಗಿದ್ದು, ಇವುಗಳ ಮೌಲ್ಯ 30 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
    ಬಿಳೆಬಾವಿ ಗ್ರಾಮದ ಮೌನೇಶ ಗುರಣ್ಣ ಬಡಿಗೇರ (28), ನಿಂಗಣ್ಣ ಬಸಪ್ಪ ಪೂಜಾರಿ (38), ಕೊಡೇಕಲ್ ಗ್ರಾಮದ ಮೀರಸಾಬ್ ರಜಾಕ್ ಸಾಬ್ ಬಳಿಗಾರ (29) ಹಾಗೂ ಮೆಹಬೂಬ ತಾಹಿರ್ ಹುಸೇನ್ ಬಳಿಗಾರ (28) ಬಂಧಿತ ಆರೋಪಿಗಳು.
    ಕಳೆದ ಒಂದೂವರೆ ವರ್ಷದಲ್ಲಿ ನಡೆದ ಕಳ್ಳತನ ಮಾಡಿ ಎಲ್ಲ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸದರಿ ಕಳ್ಳರು ಹಿರೋ ಕಂಪನಿಯ ಬೈಕ್‌ಗಳನ್ನು ನಕಲಿ ಕೀ ಬಳಸಿ ಕಳ್ಳತನ ಮಾಡಲಾಗಿದೆ. ಕೇವಲ ಮೂರು ದಿನದಲ್ಲಿ ಕಾರ್ಯಾಚರಣೆ ನಡೆಸಿ ಐವತ್ತು ಬೈಕ್ ವಶಕ್ಕೆ ಪಡೆಯಲಾಗಿದೆ.
    ಯಾದಗಿರಿ, ಕಲಬುರಗಿ, ಮುದ್ದೇಬಿಹಾಳ, ದೇ. ಹಿಪ್ಪರಗಿ, ತಾಳಿಕೋಟಿ ಭಾಗದಲ್ಲಿ ಕಳ್ಳತನ ನಡೆದಿದ್ದು ವಶಪಡಿಸಿಕೊಂಡ ಬೈಕ್‌ನಲ್ಲಿ ಮೂವತ್ತು ವಿಜಯಪುರ ಜಿಲ್ಲೆಯದ್ದಾಗಿವೆ. ಡಿವೈಎಸ್‌ಪಿ ಶಾಂತವೀರ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಿದ್ದಾಗಿ ಎಸ್‌ಪಿ ಅನುಪಮ್ ಅಗರವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
    ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ರಾಮ ಅರಸಿದ್ದಿ ಇದ್ದು ಎಲ್ಲ ಸಿಬ್ಬಂದಿಗೆ ಪ್ರಮಾಣ ಪತ್ರ ನೀಡಿ ಮೆಚ್ಚುಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts