More

    ಪುಟ್ಟರಾಜ ಸಮಿತಿ ಮಹಿಳಾ ಘಟಕ ಉದ್ಘಾಟನೆ ನಾಳೆ

    ದಾವಣಗೆರೆ: ಗದಗದ ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿ ದಾವಣಗೆರೆ ಜಿಲ್ಲಾ ಘಟಕ ಹಾಗೂ ಮಹಿಳಾ ಘಟಕದ ಉದ್ಘಾಟನೆ ಹಾಗೂ ಗುರು ಸೇವಾ ದೀಕ್ಷಾ ಸಮಾರಂಭ ಜೂ.12ರಂದು ಶಿವಯೋಗಿ ಮಂದಿರದಲ್ಲಿ ನಡೆಯಲಿದೆ.

    ಜಿಲ್ಲಾ ಘಟಕದ ಅಧ್ಯಕ್ಷ ಪಿ.ಬಿ. ವಿನಾಯಕ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಗದಗದ ಡಾ.ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಕಾರ್ಯಕ್ರಮ ಉದ್ಘಾಟಿಸುವರು. ವರ್ತಕ ಅಣಬೇರು ಮಂಜಣ್ಣ ಅಧ್ಯಕ್ಷತೆ ವಹಿಸುವರು.
    ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಡಾ.ಕೆ. ಅರುಣ್, ಪಾಲಿಕೆ ಆಯುಕ್ತೆ ರೇಣುಕಾ, ಮೇಯರ್ ವಿನಾಯಕ ಪೈಲ್ವಾನ್, ಲೆಕ್ಕ ಪರಿಶೋಧಕ ಅಥಣಿ ವೀರಣ್ಣ, ಮಾಜಿ ಮೇಯರ್ ಎಸ್.ಟಿ. ವೀರೇಶ್, ಸಂಗೀತ ಶಿಕ್ಷಕ ಶಿವಬಸಯ್ಯ ಪಿ. ಚರಂತಿಮಠ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
    ಪುಟ್ಟರಾಜಗುರು ವಚನ ಪ್ರಭಾ ವಚನ ವಿಶ್ಲೇಷಣೆ ಸಂಕಲನ ಲೋಕಾರ್ಪಣೆ ನಡೆಯಲಿದ್ದು, ಆನಂದ್ ಆರ್. ಪಾಟೀಲ್, ಎಂ.ಕೆ. ರೇವಣಸಿದ್ದಪ್ಪ ಅವರಿಂದ ಸಂಗೀತ ಕಾರ್ಯಕ್ರಮವಿದೆ. ಸುಪ್ರೀತಿ ಅವರಿಂದ ಭರತನಾಟ್ಯವಿದೆ ಎಂದು ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಸತೀಶ ಧಾರವಾಡ ತಿಳಿಸಿದರು.
    ಮಧುಮತಿ ಗಿರೀಶ್ ದೇವಿಗೆರೆ, ಎಂ.ಎಸ್. ಪುಷ್ಪಾ, ಶಾನ್ವಿ, ಎಚ್.ಎಸ್. ಶಶಿಕಲಾ, ರಾಜಶ್ರೀ ಸುದ್ದಿಗೋಷ್ಟಿಯಲ್ಲಿ ಇದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts