ಚಿತ್ರದುರ್ಗ: ಪ್ರಕರಣವೊಂದರ ತನಿಖೆಗೆಂದು ದಾವಣಗೆರೆಗೆ ಬಂದಿದ್ದ ಬೆಂಗಳೂರು ಕೆ.ಆರ್.ಪುರಂ ಠಾಣೆಯ ಪಿಎಸ್ಐ ಒಬ್ಬರು ತಮ್ಮ ಸರ್ವಿಸ್ ಪಿಸ್ತೂಲ್ ಹಾಗೂ ಹತ್ತು ಜೀವಂತ ಗುಂಡುಗಳನ್ನು ಕಳೆದುಕೊಂಡಿದ್ದಾರೆ.
ವ್ಯಕ್ತಿಯೊಬ್ಬರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆಂದು ಗುರುವಾರ ದಾವಣಗೆರೆಗೆ ಬಂದಿದ್ದ ಪೊಲೀಸರು, ಚನ್ನಗಿರಿಯಿಂದ ಚಿತ್ರದುರ್ಗ ಮಾರ್ಗ ಜಾನುಕೊಂಡ ಬಳಿಯ ಬಾರ್ಆ್ಯಂಡ್ ರೆಸ್ಟೋರೆಂಟ್ವೊಂದರಲ್ಲಿ ಗುರುವಾರ ಮಧ್ಯಾಹ್ನ ಊಟ ಮಾಡಿದ್ದಾರೆ. ಆ ದರೆ ಅಲ್ಲಿಂದ ತೆರಳುವಾಗ ಪಿಸ್ತೂಲ್, ಗುಂಡುಗಳಿದ್ದ ಬ್ಯಾಗ್ ಮರೆತು ಹೋಗಿದ್ದಾರೆ. ನಂತರ ರೆಸ್ಟೋರೆಂಟ್ಗೆ ಮರಳಿ ಬಂದು ವಿಚಾರಿಸಿ ದಾಗ ಬ್ಯಾಗ್ ನಾಪತ್ತೆಯಾಗಿರುವುದು ಗೊತ್ತಾಗಿದೆ.
ಈ ಕುರಿತು ಕೆಆರ್ಪುರಂ ಠಾಣೆ ಪಿಎಸ್ಐ ಕಲ್ಲಪ್ಪ ಅವರು, ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ. ಹೆಡ್ ಕಲ್ಲಪ್ಪ ನೇತೃತ್ವದ ಮೂವರ ತಂಡ ತನಿಖೆಗೆಂದು ದಾವಣಗೆರೆಗೆ ಬಂದಿತ್ತು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪಿಐ ಮುದ್ದುರಾಜ್ ತಿಳಿಸಿದ್ದಾರೆ.