More

    ಪತ್ರಿಕೆ ವಿತರಕರಿಗೆ ದಿನಸಿ ವಿತರಣೆ

    ಭಟ್ಕಳ: ಒಂದೆಡೆ ಕೋವಿಡ್ ಸೋಂಕಿತ ಪ್ರದೇಶಗಳಿಗೆ ರಾಸಾಯನಿಕ ಸಿಂಪಡಣೆ, ಇನ್ನೊಂದೆಡೆ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದ ಪತ್ರಿಕೆ ವಿತರಕರು. ಪಟ್ಟಣದಾದ್ಯಂತ ಆತಂಕದ ಸ್ಥಿತಿ ನಿರ್ವಣವಾದರೂ ಸೇವೆ ಬಿಡದ ಇವರ ನಿಷ್ಠೆಯನ್ನು ಎಷ್ಟು ಕೊಂಡಾಡಿದರು ಸಾಲದು ಎಂದು ರಂಜನ್ ಇಂಡೇನ್ ಏಜೆನ್ಸಿ ಮಾಲಕಿ ಶಿವಾನಿ ಶಾಂತರಾಮ ಹೇಳಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಬೆಳಗ್ಗೆ ಪಟ್ಟಣದ ಅಂದಾಜು 40ಕ್ಕೂ ಅಧಿಕ ಪತ್ರಿಕೆ ವಿತರಕರಿಗೆ ದಿನಬಳಕೆಯ ಅಗತ್ಯ ವಸ್ತುಗಳು, ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಅವರು ಮಾತನಾಡಿದರು.

    ಆರಂಭದಲ್ಲಿ ಭಟ್ಕಳದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಒಂದೇ ಸಮನೆ ಏರುತಿತ್ತು. 10ರ ಗಡಿ ದಾಟುತ್ತಿದ್ದಂತೆ ಜನರು ಆತಂಕ್ಕೆ ಒಳಗಾದರು. ಆದರೆ, ಪತ್ರಿಕೆ ವಿತರಕರು ಮಾತ್ರ ತಮ್ಮ ಕಾರ್ಯ ಮರೆಯದೆ, ಧೈರ್ಯದಿಂದ ಪತ್ರಿಕೆ ವಿತರಣೆ ಮಾಡಿ ಜನರಿಗೆ ಹೋರ ಜಗತ್ತಿನ ಮಾಹಿತಿ ತಲುಪಿಸಿದರು. ಇಂಥ ಕೆಲಸ ಮಾಡಿದ ಅವರು ಅಭಿನಂದನಾರ್ಹರು ಎಂದು ಸ್ಥಳದಲ್ಲಿದ್ದ ಪತ್ರಿಕೆ ವಿತರಕರನ್ನು ಗೌರವಿಸಿ ಅವರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಿದರು.

    ತಹಸೀಲ್ದಾರ್ ರವಿಚಂದ್ರನ, ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ಪತ್ರಕರ್ತ ರಾಧಾಕೃಷ್ಣ ಭಟ್, ಎಂ.ಆರ್. ಮಾನ್ವಿ, ವಿಜಯವಾಣಿ ಪತ್ರಿಕೆ ವಿತರಕ ಮಂಜುನಾಥ ದೇವಾಡಿಗ, ದಯಾನಂದ ನಾಯ್ಕ, ಅಜೆಯ ಮಹಾಲೆ, ಗೌತಮ ನಾಯ್ಕ, ಜಯಂತ ಗೊಂಡ, ರಾಮಕೃಷ್ಣ ಭಟ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts