ಧಾರವಾಡ: ನಗರದ ಪ್ರಸಿದ್ಧ ನುಗ್ಗಿಕೇರಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಪವರ್ಸ್ಟಾರ್ ಪುನೀತ್ ರಾಜಕುಮಾರ್- ಅಶ್ವಿನಿ ದಂಪತಿ ಸೋಮವಾರ ಸಂಜೆ ಭೇಟಿ ನೀಡಿದರು.
ಪುನೀತ್, ಅಶ್ವಿನಿ ಹಾಗೂ ಕುಟುಂಬದವರು 2 ದಿನದ ಹಿಂದೆ ದಾಂಡೇಲಿಗೆ ತೆರಳಿದ್ದರು. ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರಧಾನ ಅರ್ಚಕ ಕಾಂತೇಶ ಬೊಮ್ಮನಹಳ್ಳಿ, ಟ್ರಸ್ಟಿಗಳಾದ ಅರುಣಾ ದೇಸಾಯಿ, ವ್ಯಾಸ ದೇಸಾಯಿ, ಗುರುರಾಜ, ಬದರಿನಾಥ ಇತರರಿದ್ದರು.