More

    ನರಗುಂದದ ಮಣ್ಣು, ನವಿಲು ತೀರ್ಥದ ನೀರು ರವಾನೆ

    ನರಗುಂದ: ಬಂಡಾಯದ ನಾಡು ನರಗುಂದದ ಮಣ್ಣು ಮತ್ತು ನವಿಲು ತೀರ್ಥದ ನೀರಿಗೆ ವಿರಕ್ತಮಠದ ಶಿವಕುಮಾರ ಶ್ರೀಗಳಿಂದ ಶುಕ್ರವಾರ ವಿಶೇಷ ಪೂಜೆ ಮಾಡಿಸಿ ಅಯೋಧ್ಯೆಯ ಶ್ರೀರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪಟ್ಟಣದ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಕಳುಹಿಸಿಕೊಟ್ಟರು.

    ಹೊಳೆಆಲೂರಿನ ಲಕ್ಷ್ಮೀ ನಾರಾಯಣ ದೇವಸ್ಥಾನ, ನರಗುಂದದ ವೆಂಕಟೇಶ್ವರ ದೇವಸ್ಥಾನ, ಅರಸ ಬಾಬಾಸಾಹೇಬ ಭಾವೆ, ಆಲೂರು ವೆಂಕಟರಾಯರು, ಜಗನ್ನಾಥರಾವ್ ಜೋಶಿ ಸ್ಮಾರಕ ಭವನ ಮತ್ತಿತರ ಪ್ರಮುಖ ಸ್ಥಳಗಳಲ್ಲಿನ ಮಣ್ಣು ಮತ್ತು ನವಿಲುತೀರ್ಥ ಜಲಾಶಯದ ನೀರನ್ನು ಶೇಖರಿಸಿ ಅಂಚೆ ಮೂಲಕ ಕಳುಹಿಸಿಕೊಡಲಾಯಿತು. ವಿಶ್ವ ಹಿಂದು ಪರಿಷತ್ ತಾಲೂಕಾಧ್ಯಕ್ಷ ರವಿ ಹೊಂಗಲ, ಉಪಾಧ್ಯಕ್ಷ ಸುರೇಶ ಹೂಗಾರ, ಕಾರ್ಯದರ್ಶಿ ವಿಕ್ರಮ ಬೆಳದಡಿ, ಗೋರಕ್ಷಾ ಪ್ರಮುಖ ಶ್ರೀಶೈಲ ಪಾಟೀಲ, ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖ ಬಸವರಾಜ ಗಡೇಕಾರ, ತಾಲೂಕು ಸಂಯೋಜಕ ಬಸವರಾಜ ಬಿರಾದಾರ, ಸಹ ಸಂಯೋಜಕ ವೆಂಕಟೇಶ ಖಾನಪೇಟ, ಬಸವರಾಜ ತೋಬ್ರಿ, ಜಗದೀಶ ನಂದಿ, ನಿರಂಜನ ಮಡಿವಾಳರ, ಪ್ರವೀಣ ಗಡೇಕಾರ, ಲಂಕೇಶ ಮುದ್ದನಗೌಡ್ರ, ಹರೀಶ ರಾಮದುರ್ಗ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts