More

    ಧ್ಯಾನದಿಂದ ಆತ್ಮಶಕ್ತಿ ವೃದ್ಧಿ

    ಗದಗ: ಮಾನಸಿಕ ಮತ್ತು ದೈಹಿಕ ಶಕ್ತಿಗೆ ಮಹತ್ವ ನೀಡಬೇಕು ಹಾಗೂ ಧ್ಯಾನ ಮಾಡುವುದರ ಮುಖಾಂತರ ಆತ್ಮಶಕ್ತಿ ವೃದ್ಧಿಸಿಕೊಳ್ಳುವುದು ಅವಶ್ಯಕ ಎಂದು ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜಗನ್ನಾಥಾನಂದಜಿ ಮಹಾರಾಜ್ ಹೇಳಿದರು.

    ನಗರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ನಿರ್ದೇಶನಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಡಿ ಶುಕ್ರವಾರ ಆಯೋಜಿಸಿದ್ದ 2ನೇ ಯೋಗ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

    ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ಪ್ರಸ್ತುತ ದಿನದಲ್ಲಿ ಯೋಗಕ್ಷೇಮ ಹೊಂದುವುದು ಮತ್ತು ಜಾಗೃತಿ ವಹಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.

    ಯೋಗದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಯೋಗದ ಭಿತ್ತಿ ಪತ್ರಗಳನ್ನು ವಿತರಿಸಲಾಯಿತು. ಕುಲಸಚಿವ ಡಾ. ಬಸವರಾಜ ಲಕ್ಕಣ್ಣವರ ಸ್ವಾಗತಿಸಿದರು. ಡಾ. ವೀರೇಶಕುಮಾರ ವಿಜಾಪುರ ಶಿಬಿರದ ವರದಿ ಮಂಡಿಸಿದರು. ಶಶಿಕಲಾ ಹಳ್ಳಿಕೇರಿ ಪ್ರಾರ್ಥನೆ ಗೀತೆ ಹಾಡಿದರು. ಡಾ. ನೀಲಮ್ಮ ನಿರೂಪಿಸಿದರು. ರಾಘವೇಂದ್ರ ಇಚ್ಚಂಗಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts