More

    ಧಾರವಾಡ ಜಿಲ್ಲೆಗೆ ಜ.12ರಂದು ಪ್ರಧಾನಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಪ್ರಧಾನಿ ನರೇಂದ್ರ ಮೋದಿ ಅವರು ಜ.12ರಂದು ಧಾರವಾಡ ಜಿಲ್ಲೆಗೆ ಆಗಮಿಸಲಿದ್ದಾರೆ. ಅಂದು ನಡೆಯಲಿರುವ ಯುವಜನ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

    ಮಹದಾಯಿ ನೀರಿಗಾಗಿ ಕಾಂಗ್ರೆಸ್ ಜ. 2ರಂದು ಪ್ರತಿಭಟನೆ ನಿಗದಿ ಮಾಡಿರುವುದು ಗಮನಕ್ಕಿದೆ. ಇದರ ಬಗ್ಗೆ ಮಾತನಾಡಲು ಕಾಂಗ್ರೆಸ್​ಗೆ ನೈತಿಕತೆ ಇಲ್ಲ. ಕುಡಿಯುವ ನೀರಿಗಾಗಿ ಅಂದಿನ ಪ್ರಧಾನಿ ಮನಮಹೋನ ಸಿಂಗ್ ಅವರಿಗೆ ಪರಿಪರಿಯಾಗಿ ಬೇಡಿಕೊಂಡಿದ್ದೆವು. ಆದರೂ ಕ್ಯಾರೆ ಎನ್ನಲಿಲ್ಲ. ಅಂತಿಮವಾಗಿ ನ್ಯಾಯಾಧಿಕರಣದಿಂದ ಒಪ್ಪಿಗೆ ಪಡೆಯಬೇಕಾಯಿತು. ಯೋಜನೆ ಜಾರಿಗೆ ಕೊನೆಯ ಹಂತದ ತೀರ್ಮಾನ ತೆಗೆದುಕೊಳ್ಳಲು ಸಜ್ಜಾಗಿದ್ದೇವೆ ಎಂದರು.

    ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಲಿ. ಏಕೆಂದರೆ ಅವರು ಹೋದಲೆಲ್ಲ ಕಾಂಗ್ರೆಸ್ ಸೋತಿದೆ. ಇದನ್ನು ತಡೆಯಬೇಕೆಂದು ಕೋವಿಡ್ ನಿಯಮಾವಳಿ ರೂಪಿಸಿಲ್ಲ. ಜೋಡೋ ಯಾತ್ರೆ ಮಾಡುವವರು ವಿದೇಶಕ್ಕೆ ಒಂದು ವಾರ ಏಕೆ ಹೋಗಿದ್ದರು ಎಂದು ಜನರಿಗೆ ಗೊತ್ತಿದೆ. ಕೋವಿಡ್ ಕಾಂಗ್ರೆಸ್​ಗೆ ವರವಾಗಿ ಪರಿಣಮಿಸಲಿದೆ ಎಂದು ಜೋಶಿ ವ್ಯಂಗ್ಯವಾಡಿದರು.

    ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ ನಡೆಸುವುದಿಲ್ಲ. ಪೂರ್ಣಾವಧಿ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಮುಂದುವರಿಯುವರು. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸಲಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts