More

    ಧರ್ಮದ ಶ್ರೇಷ್ಠತೆಯ ಅರಿವು ಇಲ್ಲದಿರುವುದೇ ಸಮಸ್ಯೆಗಳಿಗೆ ಕಾರಣ: ಕಾವೇರಿ ರಾಯ್ಕರ್ ಬೇಸರ

    ಶಿಕಾರಿಪುರ: ಹಿಂದು ಧರ್ಮದ ಶ್ರೇಷ್ಠತೆಯನ್ನು ಅರಿತು ಧರ್ಮಾಚರಣೆ ಮಾಡಿ, ಧರ್ಮದ ರಕ್ಷಣೆಗಾಗಿ ಜಾಗೃತರಾಗಿರಿ ಎಂದು ಹಿಂದು ಜನ ಜಾಗೃತಿ ಸಮಿತಿಯ ಕಾವೇರಿ ರಾಯ್ಕರ್ ಹೇಳಿದರು.
    ತಾಲೂಕಿನ ಚನ್ನಳ್ಳಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದು ಜನಜಾಗೃತಿ ಸಮಿತಿ ಆಯೋಜಿಸಿದ್ದ ಹಿಂದು ರಾಷ್ಟ್ರ ಜಾಗೃತಿ ಸಭೆಯಲ್ಲಿ ಮಾತನಾಡಿ, ಇಂದು ಹಿಂದು ಯುವತಿಯರ ಲವ್ ಜಿಹಾದ್‌ನ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ. ಇನ್ನು ಕೆಲವರು ಆಸೆ ಆಮಿಷಗಳಿಗೆ ಬಲಿಯಾಗಿ ಮತಾಂತರವಾಗುತ್ತಿದ್ದಾರೆ. ಇಂದು ಹಿಂದುಗಳಲ್ಲಿ ಹಿಂದು ಧರ್ಮದ ಶ್ರೇಷ್ಠತೆಯ ಅರಿವಿಲ್ಲದಿರುವುದೆ ಈ ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣವಾಗಿದೆ ಎಂದರು.
    ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಕೆಳದಿ ಚನ್ನಮ್ಮರಂತಹ ಅನೇಕ ವೀರ ವನಿತೆಯರು ಮತ್ತು ರಾಷ್ಟ್ರ ಪುರುಷರು ತಮ್ಮ ಪ್ರಾಣ ಹೋದರೂ ದೇಶದ, ಧರ್ಮದ ಅಭಿಮಾನ ಬಿಡಲಿಲ್ಲ. ಆದರೆ ಇಂದು ಹಿಂದು ಯುವತಿಯರು ಮತಾಂಧರ ಕಪಟ ಪ್ರೇಮಕ್ಕೆ ಬಲಿಯಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ದೆಹಲಿಯ ಶ್ರದ್ಧಾ ಪ್ರಕರಣ, ಗದಗದ ಅಪೂರ್ವಾ ಪುರಾಣಿಕ್ ಪ್ರಕರಣ ಇನ್ನು ಹಲವಾರು ಕ್ರೂರ ಉದಾಹರಣೆಗಳು ಕಣ್ಣ ಮುಂದೆ ನಡೆಯುತ್ತಿದ್ದರೂ ಲವ್ ಜಿಹಾದ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
    ಅನ್ಯಮತೀಯರು ತಾವು ಎಷ್ಟೇ ಬಡವರಾಗಿದ್ದರೂ, ಅವರಿಗೆ ಎಷ್ಟೇ ಆಮಿಷವನ್ನು ನೀಡಿದರೂ ಅವರು ಮತ್ತೊಂದು ಧರ್ಮಕ್ಕೆ ಮತಾಂತರ ಆಗುವುದಿಲ್ಲ. ಆದರೆ ಇಂದು ಹಿಂದುಗಳಲ್ಲಿ ಸ್ವಧರ್ಮದ ಶ್ರೇಷ್ಠತೆಯ ಅರಿವಿಲ್ಲದಿರುವುದರಿಂದ ಆಮಿಷಕ್ಕೆ ಬಲಿಯಾಗಿ ಮತಾಂತರವಾಗುತ್ತಿದ್ದಾರೆ. ಇಂದು ದೇಶದ ಏಳು ರಾಜ್ಯಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ. ಮತಾಂತರ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಭಾರತದಲ್ಲಿಯೂ ಹಿಂದುಗಳು ಅಲ್ಪಸಂಖ್ಯಾತರಾದರೆ ಆಶ್ಚರ್ಯ ಪಡಬೇಕಾಗಿಲ್ಲ. ಹೀಗಾಗಿ ಹಿಂದು ಸಮಾಜದ ವಿರುದ್ಧ ನಡೆಯುತ್ತಿರುವ ಎಲ್ಲ ಷಡ್ಯಂತ್ರವನ್ನು ಅರಿತು ಹಿಂದುಗಳು ಜಾಗೃತರಾಗಬೇಕಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts