More

    ದೋಣಿ ಮುಳುಗಡೆಯಾಗಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

    ಭಟ್ಕಳ: ಆ. 29ರಂದು ಮೀನುಗಾರಿಕೆ ತೆರಳಿದ್ದ ವೇಳೆ ದೋಣಿ ಮುಳುಗಡೆಯಾಗಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಶುಕ್ರವಾರ ಪಟ್ಟಣ ವ್ಯಾಪ್ತಿಯ ಕಾಗೆ ಗುಡ್ಡದ ಸಮೀಪ ಪತ್ತೆಯಾಗಿದೆ.
    ನಾಪತ್ತೆಯಾಗಿದ್ದ ನಾಗರಾಜನ ಮೃತ ದೇಹಕ್ಕಾಗಿ ಮೀನುಗಾರರು ಮೂರ್ನಾಲ್ಕು ದೋಣಿಗಳ ಸಹಾಯದಿಂದ ಶೋಧ ಕಾರ್ಯ ನಡೆಸುತ್ತಿದ್ದರು. ತಾಲೂಕಿನ ಕಾಗೆ ಗುಡ್ಡದ ದ್ವೀಪದ ಸಮೀಪ ಮೃತ ದೇಹ ಪತ್ತೆಯಾಗಿದೆ.
    ಘಟನೆ ವಿವರ: ಆ.29 ರಂದು ಜಾಲಿ ಸಮುದ್ರ ತೀರದಿಂದ ಮೀನುಗಾರಿಕೆಗಾಗಿ ಮೂವರು ಮೀನುಗಾರರು ತೆರಳಿದ್ದರು. ಈ ವೇಳೆ ಅಲೆಯ ಹೊಡೆತಕ್ಕೆ ದೋಣಿ ಮುಳುಗಡೆಯಾಗಿತ್ತು. ದೋಣಿಯಲ್ಲಿದ್ದ ಮೂವರಲ್ಲಿ ನಾಗರಾಜ ಮೊಗೇರ ನಾಪತ್ತೆಯಾಗಿದ್ದ. ಇನ್ನಿಬ್ಬರು ಮುಳುಗಡೆಯಾದ ದೋಣಿಯಿಂದಲೇ ರಕ್ಷಣೆ ಮಾಡಿಕೊಂಡು ದಡ ಸೇರಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts