More

    ದೊಡ್ಡಿಗೆ ನುಗ್ಗಿ 5 ಕುರಿ ಕೊಂದ ಚಿರತೆ

    ಹೊಳೆಹೊನ್ನೂರು: ಭದ್ರಾವತಿ ತಾಲೂಕಿನ ಅರಸನಘಟ್ಟ ತಾಂಡಾದಲ್ಲಿ ಹೆಣ್ಣು ಚಿರತೆಯೊಂದು ಮರಿಗಳ ಗುಂಪಿನೊಂದಿಗೆ ಕುರಿ ದೊಡ್ಡಿಗೆ ನುಗ್ಗಿ 5 ಕುರಿಗಳನ್ನು ಕೊಂದು ಹಾಕಿದೆ. ಅರಸನಘಟ್ಟದ ವೃದ್ಧೆ ಮಂಜಿಬಾಯಿ ಕುರಿದೊಡ್ಡಿಗೆ ಚಿರತೆ 4-5 ಮರಿಗಳೊಟ್ಟಿಗೆ ನುಗ್ಗಿದೆ. 5 ಕುರಿಗಳನ್ನು ಕೊಂದು ಹಾಕಿದೆ. 4 ಕುರಿಗಳ ಕುತ್ತಿಗೆ ಕಚ್ಚಿ ಕೊಂದು ಅಲ್ಲಿಯೆ ಬಿಟ್ಟು ಹೋಗಿದ್ದು ಒಂದು ಕುರಿಯನ್ನು ಭದ್ರಾ ನಾಲೆಯವರೆಗೂ ಎಳೆದುಕೊಂಡು ಹೋಗಿ ಚಾನೆಲ್ ದಂಡೆಯಲ್ಲಿ ತಿಂದು ಹಾಕಿವೆ. ಅರಸನಘಟ್ಟ, ಆದ್ರಿಹಳ್ಳಿ, ದಿಗ್ಗೆನಹಳ್ಳಿ ಭಾಗದಲ್ಲಿ ಚಿರತೆ ಹಾಗೂ ಕರಡಿ ಕಾಣಿಸುತ್ತಿದ್ದು ಹೆಣ್ಣು ಚಿರತೆಯೊಂದು 4-5 ಮರಿಗಳೊಟ್ಟಿಗೆ ಅಲ್ಲಲ್ಲಿ ಪ್ರತ್ಯಕ್ಷವಾಗುತ್ತಿದೆ. ಗ್ರಾಮಸ್ಥರು ಹೊಲ ಗದ್ದೆಗಳಿಗೆ ಹೋಗಲು ಬ್ಲೂಟೂತ್ ಧ್ವನಿವರ್ಧಕಗಳನ್ನು ಬೈಕ್‌ಗಳಿಗೆ ಕಟ್ಟಿಕೊಂಡು ಜೋರಾಗಿ ಶಬ್ದ ಮಾಡುತ್ತಾ ಹೋಗುತ್ತಿದ್ದಾರೆ. ಕಳೆದ ವರ್ಷ ಪಕ್ಕದ ದಿಗ್ಗೆನಹಳ್ಳಿಯಲ್ಲಿ ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಚಿರತೆಯೊಂದು ಬಿದ್ದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts