More

    ದಾನಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನ

    ನಾಪೋಕ್ಲು: ಕಾರುಗುಂದದಲ್ಲಿ 2.50 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಚೇರಂಬಾಣೆ ಗೌಡ ಸಮಾಜದ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ಮಾಡಿದವರನ್ನು ಸನ್ಮಾನಿಸಲಾಯಿತು.
    ಬೆಂಗಳೂರಿನ ಉದ್ಯಮಿಗಳಾದ ಕೇಕಡ ಎ.ನಂದ, ಹೃದ್ರೋಗ ಹಾಗೂ ಮಧುಮೇಹ ತಜ್ಞ ಬೆಂಗಳೂರಿನ ಡಾ.ಬೋಜಮ್ಮ ಜೋಯಪ್ಪ ಬೈತಡ್ಕ, ಬೆಂಗಳೂರಿನ ಉದ್ಯಮಿಗಳಾದ ತೇನನ ಎಸ್.ರಾಜೇಶ್, ಬೆಂಗಳೂರಿನ ಆರ್ಕಿಟೆಕ್ಟ್ ಇಂಜನಿಯರ್ ಮುಕ್ಕಾಟಿ ಎ.ಮನೋಜ್ ಕುಮಾರ್ , ಕುಂದಚೇರಿ ನಿವೃತ್ತ ಇಂಜಿನಿಯರ್, ನಿರ್ದೇಶಕ ಕೆದಂಬಾಡಿ ಆರ್.ರಾಜು ಅವರನ್ನು ಸನ್ಮಾನಿಸಲಾಯಿತು.

    ಸಮಾಜದ ಕಟ್ಟಡ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ ಗೌಡ ಸಮಾಜದ ಆಡಳಿತ ಮಂಡಳಿ ಅಧ್ಯಕ್ಷ ಕೊಡಪಾಲು ಎಸ್.ಗಪ್ಪು ಗಣಪತಿ, ಉಪಾಧ್ಯಕ್ಷ ಕೇಕಡ ಎ.ದಿನೇಶ್, ಖಜಾಂಚಿ ಬೈಮನ ಬಿ.ಹರೀಶ್, ನಿರ್ದೇಶಕರಾದ ಪೊಡನೋಲನ ಟಿ.ಶ್ರೀನಿವಾಸ್, ಮುಕ್ಕಾಟಿ ಆರ್.ನಾಣಯ್ಯ, ಕೊಡಗನ ತೀರ್ಥಪ್ರಸಾದ್, ಮಡಿಕೇರಿ ಪ್ರವೀಣ, ತೊತ್ತಿಯನ ಚೇತಕ್, ಕೂರನ ಮೋಹನ್, ನೈಯ್ಯಣಿ ಜಯಪ್ರಕಾಶ್, ಕೂಡಕಂಡಿ ಕಾವೇರಮ್ಮ ಸೋಮಣ್ಣ, ನೈಯ್ಯಣಿ ಹೇಮಲತಾ, ಮುಕ್ಕಾಟಿ ವೇದಾವತಿ ಅವರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

    ಮುಖ್ಯ ಅತಿಥಿಗಳಾದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ , ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts