More

    ದಾಂಡೇಲಿಯಲ್ಲಿ ಹುಬ್ಬಳ್ಳಿ ಬಾಲಕಿ ಅಪಹರಣ

    ಹುಬ್ಬಳ್ಳಿ: ನಗರದ ಬಾಲಕಿಯೊಬ್ಬಳನ್ನು ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಅಪಹರಿಸಿರುವ ಕುರಿತು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ನವನಗರ ಗಾಮನಗಟ್ಟಿ ಕರಿಯಮ್ಮ ದೇವಿ ದೇವಸ್ಥಾನದ ಬಳಿಯ ನಿವಾಸಿ ಮಿನಾಜಬೇಗಂ ಮಹಮ್ಮದ್ ಅನ್ಸಾರಿ (15) ಅಪಹರಿಸಲ್ಪಟ್ಟ ಬಾಲಕಿ. ಮಿನಾಜ ಜೂ. 11ರಂದು ತಾಯಿ ಜತೆಗೆ ಬಸ್​ನಲ್ಲಿ ಧಾರವಾಡದಿಂದ ಕಾರವಾರದ ಕಡೆಗೆ ಹೊರಟಿದ್ದರು. ಚಹಾ ಕುಡಿಯಲೆಂದು ದಾಂಡೇಲಿ ಬಸ್ ನಿಲ್ದಾಣದಲ್ಲಿ ಇಳಿದಿದ್ದರು. ಆ ವೇಳೆ ಬೈಕ್​ನಲ್ಲಿ ಬಂದ ಯುವಕನೊಬ್ಬ ಆಕೆಯನ್ನು ಪುಸಲಾಯಿಸಿ ಅಪಹರಿಸಿದ್ದಾನೆ ಎಂದು ಪಾಲಕರು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts