More

    ತೊಗರಿ ಬೆಳೆಗೆ ಮಂಜಿನ ಕಾಟ

    ಕಲಬುರಗಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ತೊಗರಿ ಹೊಲಗಳಲ್ಲಿ ನೀರು ನಿಂತು ಆತಂಕ ಸೃಷ್ಟಿಸಿದ್ದು, ತೊಗರಿ ಬೆಳೆದ ರೈತರು ಮುಂಜಾವಿನ ಮಂಜಿನಿಂದಾಗಿ ತೊಗರಿ ಹೂವು, ಮೊಗ್ಗು ಕಪ್ಪಾಗಿ ಸುಡದಂತೆ ಹಾಗೂ ಉದುರದಂತೆ ಮುಂಜಾಗ್ರತೆ ವಹಿಸಬೇಕು ಎಂದು ಜಂಟಿ ಕೃಷಿ ನಿದರ್ೇಶಕ ಡಾ.ರಿತೇಂದ್ರನಾಥ ಸುಗೂರ ತಿಳಿಸಿದ್ದಾರೆ.
    ಪ್ರಸಕ್ತ ತೊಗರಿ ಬೆಳೆಯು ಮೊಗ್ಗು ಹಾಗೂ ಹೂವಾಡುವ ಹಂತದಲ್ಲಿದ್ದು, ಮುಂಜಾವಿನ ಮಂಜಿನ ವಾತಾವರಣದಿಂದಾಗಿ ಎಲೆ ದೇಟು ಹಾಗೂ ಹೂವಿನ ಮೇಲೆ ಸಣ್ಣ ದುಂಡಾಕಾರದ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಮೊಗ್ಗು ಮತ್ತು ಹೂವು ಉದುರುವಿಕೆ ಅಲ್ಲಲ್ಲಿ ಕಂಡು ಬರುತ್ತಿದೆ. ವಾತಾವರಣದ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಿಸ್ಗಿಂತ ಕಡಿಮೆ ಇದ್ದು. ಮೋಡ ಕವಿದ ವಾತಾವರಣ ಮತ್ತು ಇವುಗಳಿಗೆ ಪೂರಕವಾಗಿ ತುಂತುರು ಮಳೆ ಮುಂಜಾವಿನ ಮಂಜುವಿನಿಂದ ರೋಗ ಭಾದೆ ಉಲ್ಬಣವಾಗಿ ಹರುಡುತ್ತದೆ.
    ಈ ತರಹದ ರೋಗದ ಚಿಹ್ನೆಗಳು ಕಂಡು ಬಂದಾಗ ತೊಗರಿ ಬೆಳೆದ ರೈತರು ಪ್ರತಿ ಲೀಟರ್ ನೀರಿನಲ್ಲಿ 1 ಗ್ರಾಂ ಕಾರ್ಬಂಡೈಜಿಮ್ ಬೆರೆಸಿ ಸಿಂಪಡಿಸಿಬೇಕು. ತೊಗರಿಯಲ್ಲಿ ಹೂ ಉದುರುವಿಕೆ ನಿಲ್ಲಿಸಲು ರೈತರು ಪ್ರತಿ ಎಕರೆಗೆ ಪಲ್ಸಮ್ಯಾಜಿಕ್ 2 ಕೆ.ಜಿ.ಯನ್ನು 200 ಲೀ. ನೀರಿನ ಬ್ಯಾರಲ್ನಲ್ಲಿ ಕಲಿಸಿ ಸಿಂಪಡಿಸಬೇಕು.
    ಭೂಮಿಯ ತೇವಾಂಶ ರೋಗದ ತೀವ್ರತೆ ಮೇಲೆ ಪರಿಣಾಮ ಬೀರುತ್ತದೆ. ಚಳಿಯ ಅಂಶ ಹೆಚ್ಚಾದಲ್ಲಿ ಮಾತ್ರ ಹೊಸ ಮೊಗ್ಗು ಮತ್ತು ಹೂಗಳು ಹುಟ್ಟುವ ಪ್ರಕ್ರಿಯೆ ಉತ್ತಮವಾಗಬಹುದೆಂದು ಕೃಷಿ ವಿಜ್ಞಾನಿಗಳ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts