More

    ತುಂಗಾನದಿಯಲ್ಲಿ ಕಯಾಕಿಂಗ್

    ಶಿವಮೊಗ್ಗ: ಪ್ರತಿವರ್ಷ ಉಕ್ಕಿ ಹರಿಯುವ ತುಂಗೆಯಲ್ಲಿ ಕಯಾಕಿಂಗ್ ಮೂಲಕ ಕೆಲ ಕಿ.ಮೀ. ಸಾಗುವ ಶಿವಮೊಗ್ಗದ ಸಾಹಸಿಗ ಅ.ನಾ.ವಿಜಯೇಂದ್ರ ರಾವ್, ಶುಕ್ರವಾರ ಬೆಳಗ್ಗೆ ತಮ್ಮ ಗೆಳೆಯರೊಂದಿಗೆ ಹೊನ್ನಾಳಿ ತಾಲೂಕಿನ ಶ್ರೀರಾಂಪುರದವರೆಗೆ 45 ಕಿ.ಮೀ. ಕಯಾಕಿಂಗ್​ನಲ್ಲಿ ಕ್ರಮಿಸಿದರು. ಕೋರ್ಪಲಯ್ಯನ ಛತ್ರದಿಂದ ಬೆಳಗ್ಗೆ 7ಕ್ಕೆ ಹೊರಟ ತಂಡ ಮಧ್ಯಾಹ್ನ 3 ಗಂಟೆ ವೇಳೆಗೆ ಶ್ರೀರಾಂಪುರ ತಲುಪಿತು. ಒಟ್ಟು 3 ಕಯಾಕಿಂಗ್​ನಲ್ಲಿ ಅ.ನಾ.ವಿಜಯೇಂದ್ರ ರಾವ್, ಶ್ರೀನಾಥ್ ನಗರಗದ್ದೆ, ಸಾಸ್ವೆಹಳ್ಳಿ ಸತೀಶ್, ಹರೀಶ್ ಪಟೇಲ್, ಅ.ನಾ.ಶ್ರೀಧರ್ ತೆರಳಿದರು. ತುರ್ತು ಸಂದರ್ಭದಲ್ಲಿ ನೆರವಾಗಲು ದಿಲೀಪ್ ನಾಡಿಗ್ ಮತ್ತು ಸಿ.ಎಚ್.ಪವನ್ ಎಂಬುವರು ಪ್ರತ್ಯೇಕವಾಗಿ ಕಾರಿನಲ್ಲಿ ತೆರಳಿದರು.

    ———

    ಫೋಟೋ: 7 ಎಸ್​ಎಂಜಿ 7

    ಕಯಾಕಿಂಗ್ ಮೂಲಕ ಶಿವಮೊಗ್ಗದಿಂದ ಹೊನ್ನಾಳಿ ತಾಲೂಕು ಶ್ರೀರಾಂಪುರಕ್ಕೆ ತುಂಗಾ ನದಿಯಲ್ಲಿ ಶುಕ್ರವಾರ ಸಾಹಸಿಗರ ತಂಡ ಪ್ರಯಾಣ ಆರಂಭಿಸಿದ ಕ್ಷಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts