More

    ತಿಮ್ಮಪ್ಪ ಹೆಗಡೆ ಕೆಲಸ ಎಲ್ಲರಿಗೂ ಮಾದರಿ

    ಸಾಗರ : ರಾಜಕೀಯ, ಸಹಕಾರಿ, ಧಾರ್ಮಿಕ, ಕೃಷಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೆ ಛಾಪು ಮೂಡಿಸಿದ ವ್ಯಕ್ತಿ ಎಲ್.ಟಿ.ತಿಮ್ಮಪ್ಪ ಹೆಗಡೆ. ಅವರ ಕೆಲಸ ಕಾರ್ಯಗಳು ಎಲ್ಲರಿಗೂ ಆದರ್ಶವಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
    ಸಾಗರದ ಸಭಾಭವನದಲ್ಲಿ ಶನಿವಾರ ಅಡಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದಿಂದ ಆಪೆÇ್ಸ್ಕೀಸ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಎಲï.ಟಿ.ತಿಮ್ಮಪ್ಪ ಹೆಗಡೆ ಅವರಿಗೆ ಹಮ್ಮಿಕೊಳ್ಳಲಾಗಿದ್ದ ನೆನಪು-ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಎಲï.ಟಿ.ತಿಮ್ಮಪ್ಪ ಹೆಗಡೆ ಅವರದ್ದು ಅವಿಭಕ್ತ ಕುಟುಂಬ. ಅವರು ಕೆಲಸ ಮಾಡಿದ ಕಡೆಯಲೆಲ್ಲ ಸ್ವಾರ್ಥವಿಲ್ಲದೆ ಸಂಸ್ಕಾರ ಬಿತ್ತಿದ್ದು ಮುಂದಿನ ಪೀಳಿಗೆಗೂ ಮಾದರಿಯಾಗಿವೆ. ಎಲ್ಲರ ಜತೆ ಬೆರೆತು ಕೆಲಸ ಮಾಡಿ ಪ್ರೇರಣಾದಾಯಕರಾಗಿದ್ದರು ಎಂದರು
    ಮುರುಘಾಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ ತಿಮ್ಮಪ್ಪ ಹೆಗಡೆ ಅವರ ಆದರ್ಶ ನಡೆನುಡಿ ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿ ನಿಂತು ಸಹಕಾರ ನೀಡಿದವರು. ಅವರನ್ನು ಸದಾ ನೆನಪಿಸಿಕೊಂಡು ಆದರ್ಶಗಳನ್ನು ಪಾಲಿಸಬೇಕು ಎಂದರು.
    ಆಪ್‍ಕೋಸ್ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹರತಾಳು ಹಾಲಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಬಿ.ಸ್ವಾಮಿರಾವ್, ಎಲï.ಟಿ.ತಿಮ್ಮಪ್ಪ, ಎಲ್.ಟಿ.ಗಣಪತಿ ಹೆಗಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts