More

    ತರಾತುರಿಯಲ್ಲಿ ಗುಂಡಿ ಮುಚ್ಚುತ್ತಿರುವುದಕ್ಕೆ ಆಕ್ರೋಶ

    ಗುಂಡ್ಲುಪೇಟೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಪಟ್ಟಣಕ್ಕೆ ಸೆ.30ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆಗಳ ಗುಂಡಿ ಮುಚ್ಚುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.


    ರಾಷ್ಟ್ರೀಯ ಹೆದ್ದಾರಿಯಲ್ಲಿ ಡಾಂಬರು ಕಿತ್ತು ಭಾರಿ ಗುಂಡಿಗಳು ಬಿದ್ದಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ, ಲೋಕೋಪಯೋಗಿ ಇಲಾಖೆಯಾಗಲಿ ಗುಂಡಿ ಮುಚ್ಚಿಸದೆ ನಿರ್ಲಕ್ಷ್ಯವಹಿಸಿದ್ದವು. ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ವಾಹನಗಳ ಚಾಲಕರು ದಿಢೀರನೆ ಎದುರಾಗುವ ಗುಂಡಿಯನ್ನು ಕಂಡು ತಬ್ಬಿಬ್ಬಾಗುತ್ತಿದ್ದರು. ಆದರೂ ಅವುಗಳನ್ನು ಮುಚ್ಚಲು ಮುಂದಾಗದ ಇಲಾಖೆ ಅಧಿಕಾರಿಗಳು ಭಾರತ್ ಜೋಡೋ ಪಾದಯಾತ್ರೆ ಬರುತ್ತಿದ್ದಂತೆ ತರಾತುರಿಯಲ್ಲಿ ಮುಚ್ಚುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts