ಕುಂದಗೋಳ: ಡ್ರಗ್ಸ್ ಜಾಲ ರಾಜ್ಯದ ಉದ್ದಗಲಕ್ಕೂ ವಿಸ್ತಾರವಾಗಿದ್ದು, ಎಲ್ಲ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ಗಳಿಗೂ ಆವರಿಸಿದೆ. ಇದರ ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸಬೇಕು. ಅಲ್ಲದೆ, ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ತಾಲೂಕಿನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಸೀಲ್ದಾರ್ ವಿ. ಎಂ. ಮುಳುಗುಂದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು
ಹರೀಶ ಕೊನೇರಿ, ಮಹೇಶ ಶ್ಯಾಬಳ, ಗಿರೀಶ ಗದಗಿನ, ಮಂಜುನಾಥ ಭೋವಿ, ವಿನೋದ ನಾಡಗೌಡ, ಶಿವು ಗಂಗಾಯಿ, ಪ್ರಕಾಶ ನಾವಳ್ಳಿ, ಬಸವರಾಜ ಕಾಟಾಣಿ, ಗಣೇಶ ಮಾದಪ್ಪನವರ, ಸದಾಶಿವ ಕುಂಬಾಪೂರ ಹಾಗೂ ವಿದ್ಯಾರ್ಥಿಗಳು ಇದ್ದರು