More

    ಡೈಮಂಡ್ ಕ್ರಾಸ್ ಚಿತ್ರ ನಾಳೆ ತೆರೆಗೆ

    ದಾವಣಗೆರೆ: ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ನಿರ್ಮಾಣದ ಡೈಮಂಡ್ ಕ್ರಾಸ್ ಚಿತ್ರವು ಜು. 28ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ರಾಮ್‌ದೀಪ್ ತಿಳಿಸಿದರು.
    ಸೈಬರ್ ಕ್ರೈಂ ಕಥಾ ಹಂದರದ ಒಂದು ಸಮಾಜಮುಖಿ ಸಿನಿಮಾ ಇದಾಗಿದ್ದು ಸುಮಾರು 100 ಥೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಚಿತ್ರದಲ್ಲಿ ಕಥೆಯೇ ಹೀರೋ ಆಗಿದ್ದು, ದಾವಣಗೆರೆಯ ಸುಮಾರು 20ಕ್ಕೂ ಅಧಿಕ ಯುವಕರು ಚಿತ್ರದಲ್ಲಿ ಅಭಿನಯಿಸಿದ್ದು ಚಿತ್ರದ ಸಾಹಸ ದೃಶ್ಯಗಳಲ್ಲಿ ಡ್ಯೂಪ್ ಬಳಸದೆ ಸಾಹಸ ಪ್ರದರ್ಶಿಸಿದ್ದಾರೆ ಎಂದು ಹೇಳಿದರು.
    ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಕಾರ ರಾಮಚಂದ್ರಬಾಬು ಮಾತನಾಡಿ, ಮನುಷ್ಯ ಬೇರೆಯವರಿಗೆ ಸಹಾಯ ಮಾಡಲು ಹೋದಾಗ ಯಾವ ರೀತಿ ತೊಂದರೆಗೆ ಸಿಲುಕುತ್ತಾನೆ ಹಾಗೂ ಬುದ್ಧಿಶಕ್ತಿ ಉಪಯೋಗಿಸಿ ಯಾವ ರೀತಿ ಹೊರಬರುತ್ತಾನೆ ಎಂಬುದು ಚಿತ್ರದ ವಿಶೇಷ ಎಂದರು.
    ಚಿತ್ರದ ನಾಯಕಿ ರೂಪಿಕಾ ಮಾತನಾಡಿ, ಡೈಮಂಡ್ ಕ್ರಾಸ್ ಯಾವುದೇ ಆಡಂಬರವಿಲ್ಲದ ತುಂಬಾ ವಾಸ್ತವಿಕ ಚಿತ್ರ. ಇದು ನನಗೆ ಹೊಸ ಅನುಭವ ನೀಡಿದೆ ಎಂದು ಹೇಳಿದರು.
    ದಾವಣಗೆರೆಯ ರಜತ್ ಅಣ್ಣಪ್ಪ ಮಾತನಾಡಿ, ಚಿತ್ರಕ್ಕಾಗಿ ನಮಗೆ ಮೂರು ತಿಂಗಳು ತರಬೇತಿ ನೀಡುವ ಮೂಲಕ ನೈಜ ಅಭಿನಯವನ್ನು ಹೊರ ತಂದಿದ್ದಾರೆ. ನಗರದ ಸುಮಾರು 20 ಜನ ಯುವಕರು ಚಿತ್ರದಲ್ಲಿ ನಟನೆ, ತಂತ್ರಜ್ಞಾನ ಮೊದಲಾದ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
    ಕಲಾವಿದ ಆರ್.ಟಿ.ಅರುಣ್‌ಕುಮಾರ್, ಚಿತ್ರದ ನಿರ್ಮಾಪಕ ಮನಿಶ್ ಮಿತ್ರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts