More

    ಜೆಡಿಎಸ್ ಕಚೇರಿಯಲ್ಲಿ ರಾಜ್ಯೋತ್ಸವ ಸಂಭ್ರಮ

    ಬೀದರ್: ಇಲ್ಲಿಯ ಜಾತ್ಯತೀತ ಜನತಾ ದಳದ ಜಿಲ್ಲಾ ಘಟಕದ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಹರ್ಷೋಲ್ಲಾಸದೊಂದಿಗೆ ಆಚರಿಸಲಾಯಿತು.
    ಪಕ್ಷದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
    ಪಕ್ಷದ ಕಾರ್ಯಕರ್ತರು ಕೈಯಲ್ಲಿ ಕನ್ನಡ ಬಾವುಟ ಹಿಡಿದು ಜಯಘೋಷಗಳನ್ನು ಹಾಕಿ ಕನ್ನಡಾಭಿಮಾನ ಮೆರೆದರು.
    ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷೆ ಐಲಿನ್ ಜಾನ್ ಮಠಪತಿ, ವಕ್ತಾರ ಮಹಮ್ಮದ್ ಅಸದೊದ್ದಿನ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ, ಪರಿಶಿಷ್ಟ ಘಟಕದ ಅಧ್ಯಕ್ಷ ದೇವೇಂದ್ರ ಸೋನಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಜ್ಜದ್ ಸಾಹೇಬ್, ಕ್ರಿಶ್ಚಿಯನ್ ಘಟಕದ ಜಾನ್ಸನ್ ಕಪಲಾಪುರ, ಮುಖಂಡರಾದ ಮಾರುತಿ ಬೌದ್ಧೆ, ಸಂಗಮ್ಮ ಪಾಟೀಲ, ಸಂಗಪ್ಪ ಚಿದ್ರಿ, ರಾಜಶೇಖರ ಜವಳೆ, ಮಹಮ್ಮದ್ ಅಬೇದ್ ಅಲಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿ ಕಾಳೆ, ಕೃಷ್ಣ ನಾಟೇಕರ್ ಚಿದ್ರಿ, ಮನೋಹರ ದಂಡೆ, ಸರಫರಾಜ್ ಹಾಷ್ಮಿ, ಶಾಂತಮ್ಮ, ಸಂಗೀತಾ, ಶಿವರಾಜ ಕಟಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts