ಹೊಳೆಹೊನ್ನೂರು: ಮಕ್ಕಳಿಗೆ ವೇಷಭೋಷಣ ಹಾಕುವುದರಿಂದ ಜೀವನದಲ್ಲಿ ಶಿಸ್ತು, ಸಂಯಮ ಕಲಿಯುತ್ತಾರೆ ಎಂದು ಪ್ರಾಚಾರ್ಯ ಶ್ರೀಕಾಂತ ಎಂ ಹೆಗಡೆ ಹೇಳಿದರು. ಸಮೀಪದ ಜಾವಳ್ಳಿಯ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷ್ಣ-ರುಕ್ಮಿಣಿ ವೇಷಭೂಷಣ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಪೌರಾಣಿಕ ಪಾತ್ರಗಳನ್ನು ವೇಷದೊಂದಿಗೆ ಅನುಭವಿಸಿದಾಗ ಅತ್ಯುತ್ತಮ ಗುಣಗಳನ್ನು ಅಳವಡಿಸಿಕೊಳ್ಳುತ್ತಾರೆ. ಭಾರತದಂತಹ ಬಹು ಸಂಸ್ಕೃತಿಯ ದೇಶದಲ್ಲಿ ಧಾರ್ಮಿಕ ಭಾವನೆಗಳನ್ನು ಹೊಂದಲು ಸಹಾಯಕವಾಗುತ್ತದೆ ಎಂದರು. ಮುಖ್ಯಶಿಕ್ಷಕಿ ವಾಣಿ ಕೃಷ್ಣಪ್ರಸಾದ, ಸಂಯೋಜಕಿ ರೂಪಾ ಇತರರಿದ್ದರು.