ಧರ್ಮಾಪುರ: ಕಡೇ ಕಾರ್ತಿಕ ಅಂಗವಾಗಿ ನ.22ರಂದು ಗ್ರಾಮದಲ್ಲಿ ಚೆನ್ನಕೇಶವ, ಈಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.
ಮಹದೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಅಂದು ಬೆಳಗ್ಗೆ ಗಂಟೆಗೆ ಕೊಂಡೋತ್ಸವ ನೆರವೇರಲಿದೆ. ಅಲ್ಲದೆ ಓಕುಳಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ನಾಡ ಯಜಮಾನ ವೀರಭದ್ರಶೆಟ್ಟಿ, ವಿವಿಧ ಜನಾಂಗದ ಯಜಮಾನರಾದ ಚಿಕ್ಕಯಾಜಮಾನ ಸೋಮಣ್ಣಶೆಟ್ಟಿ, ನಿಂಗೇಗೌಡ, ರಾಮದಾಸನಾಯಕ, ನಾಗಶೆಟ್ಟಿ, ಸ್ವಾಮಿನಾಯಕ, ನಾರಯಣನಾಯಕ, ವಿಜಯ್ಕುಮಾರ್, ತಿಳಿಸಿದ್ದಾರೆ.