More

    ಚಿಕಿತ್ಸೆವೆಚ್ಚ ಭರಿಸಲು ಕುರುಬ ಸಮಾಜದ ಒತ್ತಾಯ

    ಚಿತ್ರದುರ್ಗ : ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಲಿತ ಮುಖಂಡ,ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಯಣ್ಣ ಅವರ ಚಿಕಿತ್ಸಾ ವೆಚ್ಚವನ್ನು ರಾಜ್ಯಸರ್ಕಾರ ಅಥವಾ ರಾಜಕಾರಣಿಗಳು ಭರಿಸಬೇಕೆಂದು ಸಂಗೋಳ್ಳಿ ರಾಯಣ್ಣ ಸೇನೆ ಮತ್ತು ಕುರುಬ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

    ಜಯಣ್ಣ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿದ ಪ್ರಮುಖರು,ಶೋಷಿತರ ಮೇಲಿನ ದೌರ್ಜನ್ಯ ಸೇರಿದಂತೆ ವಿವಿಧ ಮೌಢ್ಯಾಚಾರಣೆ,ಕಂದಾಚಾರ,ಅಸ್ಪಶ್ಯತೆ ವಿರುದ್ಧ ಹೋರಾಡುತ್ತಿರುವ ಜಯಣ್ಣ, ಸತತ 18 ವರ್ಷಗಳಿಂದ ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಗೆ ನೀರು ಹರಿಸಲೂ ಹೋರಾಟ ಮಾಡಿದ್ದಾರೆ.

    ಆದ್ದರಿಂದ ಮಾಜಿ ಸಚಿವ ಎಚ್.ಆಂಜನೇಯ,ಸಂಸದ ಎ.ನಾರಾಯಣಸ್ವಾಮಿ,ಜಿಲ್ಲಾ ಸಚಿವ ಬಿ.ಶ್ರೀರಾಮುಲು ಚಿಕಿತ್ಸೆ ವೆಚ್ಚ ಭ ರಿಸಲಿ,ಈ ನಿಟ್ಟಿನಲ್ಲಿ ಜಿಲ್ಲಾ ನೀರಾವರಿ ಹೋರಾಟ ಸಮಿತಿ, ದಲಿತ ಪರ ಸಂಘಟನೆಗಳು ಕೂಡ ಮುಂದಾಗಬೇಕೆಂದು ಮುಖಂಡರು ಅಭಿಪ್ರಾಯಪಟ್ಟರು. ಮುಖಂಡರಾದ ಎಂ.ವಿ.ಮಾಳೇಶಣ್ಣ,ಟಿ.ಆನಂದ್,ಹುಲಿಗೆ ಕುಮಾರ್,ರಘು,ಲಕ್ಷ್ಮೀಕಾಂತ್,ಕುಮಾರ್,ಬಿ. ರಾಘವೇಂದ್ರ,ಕಿರಣ್ ಕುಮಾರ್,ಪ್ರಾಣೇಶ್,ಚಿದಾನಂದ,ರಂಗಸ್ವಾಮಿ ಮತ್ತಿತರರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts