More

    ಚರ್ಮಗಂಟು ರೋಗಕ್ಕೆ ಕಡಿವಾಣ ಹಾಕಿ: ರೋಗದಿಂದ ಮೃತಪಟ್ಟ ಜಾನುವಾರುಗಳ ಮಾಲಿಕರಿಗೆ 50 ಸಾವಿರ ರೂ. ಪರಿಹಾರ ಒದಗಿಸಿ

    ಭದ್ರಾವತಿ: ಜಾನುವಾರುಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿರುವ ಚರ್ಮಗಂಟು ರೋಗ ಉಲ್ಬಣವಾಗದಂತೆ ಆ್ಯಂಟಿವೈರಸ್ ಡೋಸ್ ನೀಡಬೇಕು ಹಾಗೂ ಕಾಯಿಲೆಯಿಂದ ಮೃತಪಟ್ಟಿರುವ ರಾಸುಗಳಿಗೆ ಸರ್ಕಾರ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ನೇತೃತ್ವದಲ್ಲಿ ಶನಿವಾರ ಉಪ ತಹಸೀಲ್ದಾರ್ ರಂಗಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
    ಶಶಿಕುಮಾರ್ ಗೌಡ ಮಾತನಾಡಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಲಂಪಿ ವೈರಸ್ ಕಂಡು ಬರುತ್ತಿದ್ದು, ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಇದರಿಂದಾಗಿ ಹತ್ತರಿಂದ ಹದಿನೈದು ಲೀಟರ್ ಹಾಲು ನೀಡುತ್ತಿದ್ದ ರಾಸುಗಳು ಏಕಾಏಕಿ ಅರ್ಧ ಲೀಟರ್ ಹಾಲು ನೀಡುತ್ತಿದ್ದು, ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿವೆ. ಈಗಾಗಲೆ ರೈತರು ಅತಿವೃಷ್ಟಿ ಅನಾವೃಷ್ಟಿಯಿಂದಾಗಿ ಬೆಳೆ ಹಾನಿ ನಷ್ಟ ಅನುಭವಿಸುತ್ತಿದ್ದು, ಜಾನುವಾರುಗಳಿಗೆ ಬಂದಿರುವ ಕಾಯಿಲೆಯಿಂದ ಮತ್ತಷ್ಟು ಆರ್ಥಿಕ ನಷ್ಟ ಅನುಭವಿಸುವಂತೆ ಆಗಿದೆ. ಕೂಡಲೇ ಸರ್ಕಾರ ಸೂಕ್ತ ಚಿಕಿತ್ಸೆ ಕ್ರಮ ವಹಿಸಬೇಕು. ಪರಿಹಾರ ನೀಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ರೈತರ ಪರವಾಗಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts