More

    ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಿ

    ಅಂಕಲಗಿ: ಗೋಕಾಕ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬದ್ಧನಿದ್ದೇನೆ. ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ತಮ್ಮೆಲ್ಲರ ಸೇವೆ ಮಾಡುವ ಅವಕಾಶ ಕಲ್ಪಿಸಿದ್ದು ನನ್ನ ಸೌಭಾಗ್ಯವಾಗಿದೆ. ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಾಣದತ್ತ ಮುಂದಾಗಿ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

    ತಾಲೂಕಿನ ಅಂಕಲಗಿ ಪಪಂ ವ್ಯಾಪ್ತಿಯ ಅಕ್ಕತಂಗೇರಹಾಳ ಮತ್ತು ಅಂಕಲಗಿ ಪಟ್ಟಣದಲ್ಲಿ ನಗರೋತ್ಥಾನ ಹಂತ 4ರ ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ಹಾಗೂ 15ನೇ ಹಣಕಾಸು ಯೋಜನೆಯಡಿ 2.5 ಕೋಟಿ ರೂ. ಒಟ್ಟು ಅಂದಾಜು 8 ಕೋಟಿ ರೂ. ವೆಚ್ಚದ ರಸ್ತೆ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
    ಅಂಕಲಗಿ ಪಟ್ಟಣದ ನೂರಾರು ಜನ ಅಭಿಮಾನಿಗಳು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸ್ವಾಗತಿಸಿ, ಸನ್ಮಾನಿಸಿದರು.

    ಮುಖಂಡ ಭೀಮಗೌಡ ಪೋಲಿಸಗೌಡ್ರ, ಮುಖ್ಯಾಧಿಕಾರಿ ಬಸವರಾಜ ಮನಗುಳಿ, ಕಿರಿಯ ಅಭಿಯಂತ ಮಂಜುನಾಥ ಗಡಾದ, ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಮುನ್ನಾ ದೇಸಾಯಿ, ಬಿ.ಬಿ. ಉರಬಿನಹಟ್ಟಿ, ರಮೇಶ ನಿರ್ವಾಣಿ, ಸುನೀಲ ಮಾಸ್ತಿ, ಶಿವಾನಂದ ಇರಲಿ, ಚನ್ನಗೌಡ ಪಾಟೀಲ, ಮಲ್ಲಿಕಾರ್ಜುನ ನಾಯ್ಕ, ಶಿವಾನಂದ ಪಂಗನ್ನವರ, ಶಿವನಪ್ಪ ಕುಂದರಗಿ, ಸತ್ತೆಪ್ಪ ಅವ್ವನಗೋಳ, ಬಸವಂತ ಈಶ್ವರಪ್ಪಗೋಳ,ಬಸನಗೌಡ ನಿರ್ವಾಣಿ, ಬಸವರಾಜ ಪಟ್ಟಣಶೆಟ್ಟಿ, ಲಕ್ಕಪ್ಪ ಪೂಜೇರಿ, ಅನ್ನಾಸಾಬ ರಾಜಮಾನೆ, ಶಂಕರ ಬೂಸನ್ನವರ, ರಾಮಣ್ಣ ಸುಂಬಳಿ, ಅಖಿಲ ಕೊತ್ತವಾಲ, ಹಸೇನ ದೇಸಾಯಿ, ಅಡಿವೆಪ್ಪ ನಾವಲಗಟ್ಟಿ, ಮಂಜು ಪಟ್ಟಣಶೆಟ್ಟಿ, ಶಿವಾನಂದ ಪಟ್ಟಣಶೆಟ್ಟಿ, ಆನಂದ ಅತ್ತುಗೋಳ, ಮಲ್ಲಿಕಾರ್ಜುನ ಕುಲಿನವರ, ಅರುಣ ಮದವಾಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts