More

    ಕಾಮಗಾರಿಗೆ ಭೂಮಿ ಪೂಜೆ

    ದಾಂಡೇಲಿ: ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಯ ಅಭಿವೃದ್ಧಿಪರ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ನಗರದ ಅಭಿವೃದ್ಧಿಗಾಗಿ ಬಂದ ಅನುದಾನ ಸದುಪಯೋಗವಾಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

    ಸುದರ್ಶನಗರದಲ್ಲಿ 1.52 ಕೋಟಿ ರೂ. ವೆಚ್ಚದಲ್ಲಿ ನಗರದ ವಿವಿಧ ಭಾಗಗಗಳ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ನಗರಸಭೆ ಸದಸ್ಯ ಮಹಾದೇವ ಜಮಾದಾರ ಮಾತನಾಡಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕ ಆರ್.ವಿ. ದೇಶಪಾಂಡೆ ಅವರು ವಿಶೇಷ ಅನುದಾನ ಬಿಡುಗಡೆ ಮಾಡಿಸಿ ಕೊಡುತ್ತಿದ್ದಾರೆ. ಇದರಿಂದ ನಗರದ ಅಭಿವೃಧಿಗೆ ಸಹಾಯಕವಾಗಲಿದೆ ಎಂದರು.

    ಸುಭಾಸನಗರದಲ್ಲಿ ನಗರಸಭೆಯಿಂದ ನಿರ್ವಣದವಾದ 12 ಲಕ್ಷ ರೂ. ವೆಚ್ಚದ ಅಂಗವಾಡಿ ಕೇಂದ್ರವನ್ನು ಶಾಸಕರು ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ್, ಗೌರಾಯುಕ್ತ ರಾಜಾರಾಂ ಪವಾರ, ಶಶಿಧರ, ಬಿ.ಎಲ್. ಲಮಾಣಿ, ಸುಧಾಕರ ರೆಡ್ಡಿ, ಎಸ್.ಜಿ. ರಜಪೂತ, ನಗರಸಭೆ ಸದಸ್ಯರು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಧಾಕರ ಕಟ್ಟಿಮನಿ, ಸಹಾಯಕ ಇಂಜಿನಿಯರ್ ಸಂಜು ಪಾತ್ರೊಟ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts