More

    ಕ್ಷೇತ್ರದ ಪ್ರಗತಿಗೆ ಅಧಿಕ ಅನುದಾನ ಮಂಜೂರು

    ರಾಮದುರ್ಗ: ಕ್ಷೇತ್ರದ ಅಭಿವೃದ್ಧಿಗಾಗಿ ಹಿಂದಿಗಿಂತಲೂ ಹೆಚ್ಚಿನ ಮೊತ್ತದ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದೇನೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
    ತಾಲೂಕಿನ ಚಿಂಚಖಂಡಿ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ, 33 ಲಕ್ಷ ರೂ. ವೆಚ್ಚದಲ್ಲಿ ಗೊಣ್ಣಾಗರ ಗ್ರಾಮದಲ್ಲಿರುವ ಸುರೇಬಾನ ಮುಖ್ಯ ರಸ್ತೆಯಿಂದ ಶಬರಿಕೊಳ್ಳ ಸೇರುವ ರಸ್ತೆ ಸುಧಾರಣೆ, ಅವರಾದಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ಕಿರು ಸೇತುವೆ ನಿರ್ಮಾಣ, 50 ಲಕ್ಷ ರೂ. ವೆಚ್ಚದಲ್ಲಿ ಅವರಾದಿ ಗ್ರಾಮದಿಂದ ರಾಮದುರ್ಗ ಕೊಣ್ಣೂರ ಮುಖ್ಯ ರಸ್ತೆಯವರೆಗೆ ರಸ್ತೆ ಸುಧಾರಣೆ, 20 ಲಕ್ಷ ರೂ. ವೆಚ್ಚದಲ್ಲಿ ಸಂಗಳ ಗ್ರಾಮದಿಂದ ರಾಮದುರ್ಗ ಕೊಣ್ಣೂರಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆ, ಶಿವಪೇಠೆಯಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಗೊಣ್ಣಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಯಪ್ಪ ಕೇರಿ, ಅವರಾದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ರೋಣದ, ಮುಖಂಡರಾದ ಮಾರುತಿ ತಳವಾರ, ಚಿದಾನಂದ ಕದಂ, ಕುಮಾರ ಉಪ್ಪಿನ, ಗದಿಗೆಪ್ಪ
    ಹುಳ್ಳೂರ, ಮಹಾಂತೇಶ ಕೋಟಗಿ, ಬಸಪ್ಪ ಬಾಡವಾರ, ಮಲ್ಲನಗೌಡ ಪಾಟೀಲ, ಚನ್ನಬಸು ಕುಲಕರ್ಣಿ, ಸಿದ್ದಪ್ಪ ಯಡಹಳ್ಳಿ, ಬಸಣ್ಣ ಅಂಗಡಿ, ಸಿದ್ದಪ್ಪ ಬಣಗಾರ, ಸಿದ್ದಪ್ಪ ಕುದರಿ, ಶಿವಾನಂದ ಗುರುಬಸನ್ನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts