More

    ಕೊನೆಗೂ ಖಾಕಿ ಬಲೆಗೆ ಬಿದ್ದ ಕಾರ್ ಕಳ್ಳ

    ಕಾರವಾರ: ನಗರದಲ್ಲಿ ಬುಧವಾರ ಕಾರು ಕಳ್ಳನೊಬ್ಬನನ್ನು ಬೆನ್ನಟ್ಟಿದ ಪೊಲೀಸರು ಸಿನಿಮೀಯ ರೀತಿಯಲ್ಲಿ ಹಿಡಿದಿದ್ದಾರೆ. ಸಿದ್ದರ ಗ್ರಾಮದ ಸಂದೀಪ ಗಾಂವಕರ್ ಬಂಧಿತ ಆರೋಪಿ.

    ಪ್ರಕರಣವೇನು?: ನಗರದ ಬ್ರಾಹ್ಮಣ ಗಲ್ಲಿಯ ವಕೀಲರೊಬ್ಬರ ಕಾರು ಚಾಲಕನಾಗಿದ್ದ ಸಂದೀಪ ಗಾಂವಕರ್ 2019ರಲ್ಲಿ ಅವರದ್ದೇ ಕಾರನ್ನು ಕಳ್ಳತನ ಮಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಕಾರನ್ನು ವಶಕ್ಕೆ ಪಡೆದಿದ್ದರು. ಆದರೆ, ಪ್ರಮುಖ ಆರೋಪಿಯಾದ ಸಂದೀಪ ಮಂಗಳೂರು ಭಾಗದಲ್ಲಿ ತಲೆಮರೆಸಿಕೊಂಡಿದ್ದ.

    ಬುಧವಾರ ನಡೆದಿದ್ದೇನು?: ಮಂಗಳೂರಿನಿಂದ ತನ್ನ ಊರಾದ ಸಿದ್ದರಕ್ಕೆ ಮಂಗಳವಾರ ರಾತ್ರಿ ಬಂದಿದ್ದ. ಈ ವೇಳೆ ತಾಯಿಯೊಂದಿಗೆ ಜಗಳವಾಡಿ ಹಲ್ಲೆಯನ್ನೂ ಮಾಡಿದ್ದ. ಸಂದೀಪ ಊರಿಗೆ ಬಂದ ಮಾಹಿತಿಯನ್ನು ತಿಳಿದ ಪೊಲೀಸರು ಬುಧವಾರ ಆತನ ಮನೆಗೆ ಧಾವಿಸಿದ್ದರು. ಸಮಯಕ್ಕಾಗಲೇ ಸಂದೀಪ ಮಂಗಳೂರು ನೋಂದಣಿಯ ಕಾರ್ ಅನ್ನು ಹತ್ತಿ ಕಾರವಾರದ ಕಡೆ ಹೊರಟಿದ್ದ. ಪೊಲೀಸರ ಆಗಮನ ಗಮನಿಸಿ, ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಲು ಯತ್ನಿಸಿದ್ದ. ಲಾಕ್​ಡೌನ್ ಕಾರಣದಿಂದ ನಗರದ ವಿವಿಧೆಡೆ ಹಾಕಲಾದ ಬ್ಯಾರಿಕೇಡ್​ಗಳಿಗೆ ಕಾರನ್ನು ಡಿಕ್ಕಿ ಹೊಡೆಸುತ್ತ ಸಾಗಿದ್ದ. ಶಹರ ಠಾಣೆ ಪಿಎಸ್​ಐ ಸಂತೋಷ ಶೆಟ್ಟಿ, ಗ್ರಾಮೀಣ ಠಾಣೆ ಪಿಎಸ್​ಐ ರೇವಣ್ಣ ತಮ್ಮ ಜೀಪಿನಲ್ಲಿ ಆತನನ್ನು ಬೆನ್ನಟ್ಟಿದ್ದರು. ಅಂತಿಮವಾಗಿ ಕೋಡಿಬಾಗದ ಖಾಪ್ರಿ ದೇವಸ್ಥಾನದ ಹಿಂದಿನ ರಸ್ತೆಯಲ್ಲಿ ಮನೆಯೊಂದರ ಗೇಟ್​ಗೆ ಕಾರನ್ನು ಡಿಕ್ಕಿ ಹೊಡೆಸಿದ ಸಂದರ್ಭದಲ್ಲಿ ಪೊಲೀಸರು ಸಂದೀಪನನ್ನು ವಶಕ್ಕೆ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts