More

    ಕೃಷ್ಣ- ಮಹದಾಯಿ ಕುರಿತು ಬೃಹತ್ ಸಮಾವೇಶ

    ಬಾಗಲಕೋಟೆ: ಕಾಂಗ್ರೆಸ ಪಕ್ಷದಿಂದ ಕೃಷ್ಣ, ಮಹದಾಯಿ ಕುರಿತು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
    ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯದಿಂದಾಗಿ ಬಸ್ ಯಾತ್ರೆ ರದ್ದಾಗಿದೆಯಾ ಎನ್ನುವ ಮಾತನ್ನು ಅಲ್ಲಗಳೆದ ಮಾಜಿ ಸಿಎಂ, ಹಾಗಂತ ಯಾರು ಹೇಳಿದ್ದು? ನೀವೆ ಎಲ್ಲ ಹುಟ್ಟುಹಾಕುತ್ತೀರಾ. ದೆಹಲಿ ಸಭೆಗೆ ರಾಜ್ಯದ ೧೫, ೧೬ ಜನ ಲೀಡರ ಭಾಗವಹಿಸಿದ್ದೇವು. ಸಭೆಯಲ್ಲಿ ನಾವೆಲ್ಲ ತೀರ್ಮಾನ ಮಾಡಿದ್ದೇವೆ. ಮುಂದಿನ ೭೫ ದಿನಗಳಲ್ಲಿ ರಾಜ್ಯದಲ್ಲಿ ಏನೇನು ಮಾಡಬಹುದು ಎಂದು ನಿರ್ಧಾರ ಆಗಿದೆ. ಕೃಷ್ಣ ಮೇಲ್ದಂಡೆ ವಿಚಾರವಾಗಿ ೩೦ ರಂದು ವಿಜಯಪುರದಲ್ಲಿ ರ್ಯಾಲಿ, ಬೃಹತ್ ಸಮಾವೇಶ ನಡೆಸಲಿದ್ದೇವೆ ಎಂದರು.
    ಜ. ೨ರಂದು ಹುಬ್ಬಳ್ಳಿಯಲ್ಲಿ ಮಹದಾಯಿ ಕುರಿತು ಸಮಾವೇಶ ನಡೆಯಲಿದೆ. ಆ ಬಳಿಕ ಎಸ್ಸಿ ಎಸ್ಟಿ ಕಾನ್ಪರೆನ್ಸ್ ೮ ರಂದು ಜರುಗಲಿದೆ. ಜ.೯ ರಿಂದ ರಾಜ್ಯ ಎಲ್ಲ ಜಿಲ್ಲೆಗಳಲ್ಲಿ ಕೇಂದ್ರಗಳಲ್ಲಿ ಜಂಟಿ ಪ್ರವಾಸ ಮಾಡುತ್ತೇವೆ. ಸರ್ಕಾರದ ಭ್ರಷ್ಟಾಚಾರ, ಜನವಿರೋಽ ಕ್ರಮಗಳನ್ನು ಜನರಿಗೆ ತಿಳಿಸುತ್ತೇವೆ. ಇದೆಲ್ಲ ಆದ ಬಳಿಕ ಎರಡು ತಂಡಗಳಾಗಿ ರಾಜ್ಯದ ಎಲ್ಲ ೨೨೪ ಕ್ಷೇತ್ರಗಳನ್ನು ಸುತ್ತುತ್ತೇವೆ. ಒಂದರಲ್ಲಿ ನಾನು ಹಾಗೂ ನಮ್ಮ ಪಕ್ಷ ಹಿರಿಯ ನಾಯಕರು ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದ ಕ್ಷೇತ್ರಗಳಿಗೆ ಹಾಗೂ ಮತ್ತೊಂದು ಟೀಂ ಹಳೇ ಮೈಸೂರ ಭಾಗದಲ್ಲಿ ಡಿಕೆಶಿ ಹಾಗೂ ಹಿರಿಯ ನಾಯಕರು ಪ್ರವಾಸ ಮಾಡುತ್ತಾರೆ. ಎರಡನೇ ಹಂತದಲ್ಲಿ ಜನರಲ್ ಪ್ರವಾಸದ ವೇಳೆ ನಾನು ಆ ಕಡೆಗೆ ಅವರು ಈ ಕಡೆಗೆ ಪ್ರವಾಸ ಮಾಡುತ್ತಾರೆ ಎಂದು ವಿವರಣೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts