More

    ಕೃಷ್ಣೇಗೌಡರ ಮತಪ್ರಚಾರಕ್ಕೆ ಅಭೂತಪೂರ್ವ ಬೆಂಬಲ

    ಅರಕಲಗೂಡು: ತಾಲೂಕಿನ ರಾಮನಾಥಪುರ ಹೋಬಳಿಯಲ್ಲಿ ಪಕ್ಷೇತರ ಅಭ್ಯರ್ಥಿ ಎಂ.ಟಿ.ಕೃಷ್ಣೇಗೌಡ ಗುರುವಾರ ಕೈಗೊಂಡಿದ್ದ ಮತಯಾಚನೆಗೆ ಗ್ರಾಮಸ್ಥರಿಂದ ಅಭೂತಪೂರ್ವ ಬೆಂಬಲ ದೊರೆಯಿತು.

    ಗಂಗೂರು, ರಾಗಿಮರೂರು, ಹರಳಹಳ್ಳಿ, ಲಕ್ಕೂರು, ಕೆರಗೋಡು, ಮಧುರನಹಳ್ಳಿ, ಹನ್ಯಾಳು, ಸೋಂಪುರ, ಆನಂದೂರು, ರುದ್ರಪಟ್ಟಣ, ವಡ್ಡರಹಳ್ಳಿ, ಮತ್ತಿಗೋಡು, ಜೆ.ಹೊಸಹಳ್ಳಿ, ಕೂಡಲೂರು, ರಾಮನಾಥಪುರ, ಮೂಲೆಹೊಸಹಳ್ಳಿ ಬಸವಾಪಟ್ಟಣ, ಅಂಜನೇಯ ಹೊಸಳ್ಳಿ, ಬೇಡರಕೊಪ್ಪಲಿ, ಬೆಟ್ಟಸೋಗೆ, ಗರುಡನಹಳ್ಳಿ, ದೊಡ್ಡಕೊಪ್ಪಲು, ಯಾಚನಕುಪ್ಪೆ, ಕಾಳೇನಹಳ್ಳಿ, ಬೋರೆಕೊಪ್ಪಲು, ಟಿ. ಕೊಪ್ಪಲು, ಗೌಡನಕೊಪ್ಪಲು, ಬನ್ನಿಮರದ ಕೊಪ್ಪಲು, ಜಿಟ್ಟೇನಹಳ್ಳಿ, ಕೆಬ್ಬೆಕೊಪ್ಪಲು, ಟಿ.ಕೊಪ್ಪಲು, ಬಸವನಹಳ್ಳಿ, ಬಸವನಹಳ್ಳಿ ಕೊಪ್ಪಲು, ಹೊನ್ನೇನಹಳ್ಳಿ, ಬೂದನೂರು, ಕೇರಳಾಪುರ ಗ್ರಾಮದಲ್ಲಿ ಬಿರುಸಿನಿಂದ ಮತಪ್ರಚಾರ ನಡೆಸಿದರು.

    ಕ್ಷೇತ್ರದಲ್ಲಿ ಬದಲಾವಣೆಗಾಗಿ ಮತದಾರರು ಚುನಾವಣೆಯಲ್ಲಿ ನನಗೆ ಆಶೀರ್ವದಿಸುವ ಮೂಲಕ ಜನಸೇವೆ ಮಾಡಲು ಅವಕಾಶ ಮಾಡಿಕೊಡಬೇಕು. ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವುದೇ ನನ್ನ ಮುಂದಿರುವ ಗುರಿಯಾಗಿದ್ದು, ರೈತರು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

    ಮುಖಂಡರಾದ ಡಾ.ದಿನೇಶ್ ಭೈರೇಗೌಡ, ರಾಮೇಗೌಡ, ಜಿಪಂ ಮಾಜಿ ಸದಸ್ಯ ಎಚ್.ಎಸ್. ಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts