ಚಿತ್ರದುರ್ಗ: ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ಹೊಳಲ್ಕೆರೆ ತಾಲೂಕು ಟಿ.ನುಲೇನೂರು ಗ್ರಾಮಸ್ಥರು ಬುಧವಾರ ಗ್ರಾಪಂ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಕಳೆದ ಹತ್ತು ದಿನಗಳಿಂದಲೂ ಕುಡಿವ ನೀರಿನ ಸಮಸ್ಯೆಯನ್ನು ಗ್ರಾಮಸ್ಥರು ಎದುರಿಸುತ್ತಿದ್ದು, ಅಧಿಕಾರಿಗಳ ಗಮನಕ್ಕೆ ತ ದರು ಪ್ರಯೋಜನವಾಗಿಲ್ಲವೆಂದು ಖಾಲಿ ಕೊಡಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಸೂಕ್ತ ರೀತಿಯಲ್ಲಿ ನೀರು ಪೂರೈಸದಿದ್ದರೆ ಲೋ ಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದರು. ಮೊದಲು ನೀರು ಕೊಡಿ ನಂತರ ಮತ ಕೇಳಲು ಬನ್ನಿ ಎಂದು ಪ್ರತಿಭಟನಾ ನಿರತರು ಹೇಳಿದರು.