More

    ಕಾವೇರಿ ಮಾತೆಗೆ ಹುಣ್ಣಿಮೆ ಪೂಜೆ

    • ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಬಿ.ಎಂ.ರಸ್ತೆ ಪಕ್ಕದಲ್ಲಿ ಭಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಕಾವೇರಿ ಮಾತೆಗೆ ಹುಣ್ಣಿಮೆಯ ಪ್ರಯುಕ್ತ ಶನಿವಾರ ವಿಶೇಷ ಪೂಜೆ ನೆರವೇರಿಸಲಾಯಿತು.

    • ವಿವಿಧ ಹೋಮ-ಹವನ, ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಅರ್ಚಕರಾದ ಪುರುಷೋತ್ತಮ್ ಭಟ್, ಸಂಘದ ಅಧ್ಯಕ್ಷ ಬೇಬಿಂದ್ರ ಪ್ರಸಾದ್, ಸದಸ್ಯರಾದ ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಚಂದ್ರು, ರುದ್ರೇಶ್, ಚಂದನ್ ಅವರ್ತಿ, ಸೋಮಶೇಖರ್, ಸೇವಾರ್ಥದಾರರಾದ ಯೋಗೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts